ಗಣರಾಜ್ಯೋತ್ಸವ ಬಂದಿದೆ - ದೇಶಭಕ್ತಿ ಗೀತೆ

 ಸಾಹಿತ್ಯ ಮತ್ತು ಸಂಗೀತ:-ಉಪಾಸನಾ ಮೋಹನ್.

ಗಾಯನ:-ಉಪಾಸನಾ ಮೋಹನ್ ಮತ್ತು ಮೈತ್ರೇಯಿ ಎಂ.    



ಗಣರಾಜ್ಯೋತ್ಸವ ಬಂದಿದೆ

ಸಡಗರ ನಾಡಿಗೆ ತಂದಿದೆ

ಸಂವಿಧಾನದ ಘನತೆಯ ಸಾರಲು

ಭಾರತ ಬಾವುಟ ಏರುತಿದೆ 

ಬಾವುಟ ಹಾರುತ ಬೀಗುತಿದೆ ||


ಕಾನೂನು ಕಣ್ಣಿಗೆ ಎಲ್ಲರು ಒಂದೇ

ಹದ್ದುಮೀರದ ನಿಯಮವಿದೆ

ಸಮಾನತೆಯ ಸಹಬಾಳ್ವೆಯಲಿ

ದೇಶದ ಪ್ರಗತಿಯು ಸಾಗುತಿದೆ

ಭಾರತದೇಳಿಗೆ ಕಾಣುತಿದೆ ||


ಕಾನೂನು ಬರೆದ ಶಿಲ್ಪಿಯ ಸ್ಮರಿಸಿ

ಬಾಳುವ ನೀತಿಯ ಬೇಲಿಯಲಿ

ಕೆಡವಿ ಕೊಲ್ಲುವ ಮನಸನು ತಾಳದೆ 


ಮೀಯುವ ಸ್ನೇಹದ ಕಡಲಿನಲಿ

ಭಾರತಾಂಬೆಯ ಮಡಿಲಿನಲಿ ||