ಉದಯ ಗಗನದಲಿ ಅರುಣನ ಛಾಯೆ - ಭಾವಗೀತೆ - ಕುವೆಂಪು

 ಉದಯ ಗಗನದಲಿ ಅರುಣನ ಛಾಯೆ

ಸಾಹಿತ್ಯ:-ಕುವೆಂಪು

ಸಂಗೀತ:-ಇಂದೂ ವಿಶ್ವನಾಥ

ಗಾಯನ:-ಸಮೂಹ ಗಾಯನ



ಉದಯ ಗಗನದಲಿ ಅರುಣನ ಛಾಯೆ

ಜಗದ ಜೀವನಕೆ ಚೇತನವೀಯೆ

ನಿನ್ನಯ ಗಾನನ ಸುಮಧುರ ಮಾಯೆ

ವನದಿಂದಂಬರಕೇರುವುದು

ಕೋರಿಕೆಗಳ ಬಾಯಾರುವುದು || ಪ ||


ಪ್ರಭಾತ ಮೌನವನೆಚ್ಚರ ಮಾಡಿ

ಕಾಡು ನಾಡುಗಳ ತುಂಬಿ ತುಳುಕಾಡಿ

ಜಗನ್ನಿದ್ರೆಗೆ ಜೋಗುಳ ಹಾಡಿ

ಬ್ರಹ್ಮವನೆ ತೂಗಾಡುವುದೂ 

ಕ್ರಾಂತಿಗೆ ಶಾಂತಿಯ ನೋ ಡುವುದೂ ||


ಓ ವನಗಾಯಕಾ... ವರವಾಗೀಶಾ...

ನಿನ್ನ ಕಾನನ ಕೂಜನ ಪಾಶಾ...

ಕಬ್ಬಿಗರಿಗೆ ಮುಕ್ತಿಯ ಆವೇಶಾ...

ಸ್ವರಛಾಪಕೆ ನೀ ಸ್ವರಬಾಣ... ||


ಕೇಳಿದರಲ್ಲದೆ ತಿಳಿಯದು ನಿನ್ನಾ 

ಕಂಠದ ವೈಖರಿ ತುದಿಯಲಿ ನನ್ನಾ

ಸಾವಿನ ಬಯಕೆಯು ನಿನ್ನಾ ಗಾನ

ನಿನಗೆ ನಮೋ ಓ ಕಾಜಾಣ ||