ಏಸು ಕಾಯಂಗಳ ಕಳೆದು


ಸಾಹಿತ್ಯ:-ಕನಕದಾಸರು

ಗಾಯನ:-ಪುತ್ತೂರು ನರಸಿಂಹ ನಾಯಕ್



ಏಸು ಕಾಯಂಗಳ ಕಳೆದು ಎಂಭತ್ನಾಲ್ಕು ಲಕ್ಷ

ಜೀವ ರಾಶಿಯನ್ನು ದಾಟಿ ಬಂದ ಈ ಶರೀರ ||


ತಾನಲ್ಲ ತನ್ನದಲ್ಲ ಆಸೆ ತರವಲ್ಲ , ಮುಂದೆ ಬಾಹೋದಲ್ಲ

ದಾಸನಾಗು ವಿಶೇಷನಾಗು ||


ಆಶ ಕ್ಲೇಶ ದೋಷವೆಂಬ ಅಬ್ಬಿಯೊಳು ಮುಳುಗಿ

ಯಮನ ಪಾಶಕ್ಕೊಳಗಾಗದೆ ನಿರ್ದೋಶಿಯಾಗು ಸಂತೋಷಿಯಾಗು||


ಕಾಶಿ ವಾರಾಣಸಿ ಕಂಚಿ ಕಾಳಹಸ್ತಿ ರಮೇಶ್ವರ

ಎಸು ದೇಶ ತಿರುಗಿದರು ಬಾಹೂದೇನೂ ಅಲ್ಲಿ ಹೋದೆನು ||


ದೂಷನಾಶ ಕೃಷ್ಣವೇಣಿ ಗಂಗೆ ಗೋದಾವರಿ ಭವ

ನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ ||


ಮೀಸಲಾಗಿ ಮಿಂದು ಜಪ ತಪ ಹೋಮ ನೇಮಗಳ

ಎಸು ಬಾರಿ ಮಾಡಿದರು ಫಲವೇನು ಈ ಛಲವೇನು ||ದಾಸ||


ಅಂದಿಗೊ ಇಂದಿಗೊ ಒಮ್ಮೆ ಸಿರಿ ಕಮಲೇಶನ್ನನ್ನು 

ಒಂದು ಬಾರಿಯಾರು ಹಿಂದ ನೆನೆಯಲಿಲ್ಲ ಮನ ದಣಿಯಲಿಲ್ಲ ||


ಬಂದು ಬಂದು ಭ್ರಮೆಗೊಂಡು ಮಾಯಾ ಮೋಹಕ್ಕೆ ಸಿಕ್ಕಿ

ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ದ್ವಂದ್ವ ಕಳೆಯಲ್ಲಿಲ್ಲ ||


ಸಂದೇಹವ ಮಾಡಿದರು ಅರಿಯು ಎಂಬ ದೀಪವಿಟ್ಟು

ಇಂದು ಕಂಡ್ಯ ದೇಹದಲ್ಲಿ ಪೀoಡಾoಡ ಹಾಗೆ ಬ್ರಹ್ಮಾಂಡ ||


ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ

ಮುಕುಂದನೀಂದ ಮುಕ್ತಿ ಬೇಡುಕಂಡ್ಯ ನೀ ನೋಡುಕಂಡ್ಯ ||ದಾಸ||


ಮೂರುಬಾರಿ ಶರಣು ಮಾಡಿ ನೇರ ಮುಳುಗಲ್ಲ್ಯಾಕೆ

ಪರನರಿಯರ ನೋಟಕೆ ಗುರಿಯ ಮಾಡಿದಿ ಮನ ಸೆಳೆಯ ಮಾಡಿದಿ ||


ಸುರೆಯೋಳು ಸುರೆ ತುಂಬಿ ಮೇಲೆ ಹೂವಿನ ಹಾರ

ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮೆರೆಸಿದಂತೆ||


ಗಾರುಡಿಯ ಮಾತ ಬಿಟ್ಟು ನಾದ ಬ್ರಹ್ಮನ ಪಿಡಿದು

ಸಾರಿ ಸುರಿ ಮುಕ್ತಿಯನ್ನು ಶಮನದಿಂದ ಮತ್ತೆ ಸಮನದಿಂದ ||


ನಾರಾಯಣ ಅಚುತ್ಯ ಅನಂತಾದಿ ಕೇಶವನ

ಸಾರಮೃತವನ್ನು ಉಂಡು ಸುಖಿಸೋ ಲಂಡ ಜೀವವೇ ಎಲೋ ಭಂಡ ಜೀವವೇ ||ದಾಸ||



*