ರಾಮಾಯಣ - ಪ್ರಶ್ನೋತ್ತರಗಳಲ್ಲಿ.

 


1) ರಾಮಾಯಣ ರಚಿಸಿದವರು ಯಾರು?

ಉತ್ತರ: ವಾಲ್ಮೀಕಿ ಮಹರ್ಷಿಗಳು

2) ವಾಲ್ಮಿಕಿ ಯಾವ ವಂಶಜರು?

ಉತ್ತರ: ಭೃಗುವಂಶ

3) ವಾಲ್ಮಿಕಿಯ ತಂದೆಯ ಹೆಸರೇನು?

ಉತ್ತರ: ಪುಚೇತನ ಮಹರ್ಷಿಗಳು

4) ಸಂಸ್ಕೃದಲ್ಲಿ ವಲ್ಮಿಕಿ ಎಂದರೇನು?

ಉತ್ತರ: ಹುತ್ತ

5) ರಾಮಾಯಣದ ಒಟ್ಟು ಎಷ್ಟು ಕಾಂಡಗಳು?

ಉತ್ತರ: ೦೮

6)ರಾಮಾಯಣದ ಕಾಂಡಗಳು ಯಾವುವು?

ಉತ್ತರ: ಬಾಲಾಕಾಂಡ, ಆಯೋಧ್ಯಕಾಂಡ, ಅರಣ್ಯಕಾಂಡ,ಕಿಷ್ಕಿಂಧಾಕಾಂಡ, ಸುಂದರಕಾಂಡ, ಲಂಕಾಕಾಂಡ, ಉತ್ತರಕಾಂಡ, ಲವ-ಕುಶ ಕಾಂಡ, 

7) ಕನ್ನಡದಲ್ಲಿ ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ರಚಿಸಿದವರು ಯಾರು? 

ಉತ್ತರ : ರಾಷ್ಟ್ರಕವಿ ಕುವೆಂಪು

8) ತಮಿಳಿನಲ್ಲಿ ರಾಮಾಯಣವನ್ನು ರಚಿಸಿದವರು ಯಾರು ?

ಉತ್ತರ : ಕಂಬನ್

9) ಲಂಕಾಕಂದಕ್ಕಿರುವ ಮತ್ತೊಂದು ಹೆಸರೇನು?

ಉತ್ತರ : ಯುದ್ದಕಾಂಡ

10) ರಾಮಾಯಣ ಯಾವ ಯುಗಕ್ಕೆ ಸೇರಿದ್ದು? 

ಉತ್ತರ : ತ್ರೇತಾಯುಗ

11) ರಾಮನ ವಂಶ ಯಾವುದು ? 

ಉತ್ತರ : ಸೂರ್ಯವಂಶ 

12) ಸೂರ್ಯವಂಶದ ಮೊದಲ ರಾಜನ ಹೆಸರು ?

ಉತ್ತರ : ಇಕ್ಷ್ವಾಕು

13) ಇಕ್ಷ್ವಾಕುವಿನ ತಂದೆ ಯಾರು ? 

ಉತ್ತರ : ಸೂರ್ಯದೇವ

15) ಸೂರ್ಯವಂಶಕ್ಕಿರುವ ಮತ್ತೊಂದು ಹೆಸರೇನು ?

ಉತ್ತರ : ರಘುವಂಶ

16) ಸೂರ್ಯವಂಶದ ಮತ್ತೊಬ್ಬ ಕಿರ್ತಿವಂತ ರಾಜ ಯಾರು ?

ಉತ್ತರ : ಸತ್ಯ ಹರಿಶ್ಚಂದ್ರ

17) ದಶರಥನ ಮೂವರು ಪಟ್ಟ ಮಹಿಷಿಯರು 

ಯಾರು ? 

ಉತ್ತರ : ಕೌಸಲ್ಯಾ, ಸುಮಿತ್ರೆ, ಕೈಕೆಯಿ

18) ದಶರಥ ಮಹಾರಜನ ತಂದೆ ಯಾರು ?

ಉತ್ತರ : ಅಜ ಮಹಾರಾಜ

19) ಕೌಶಲ್ಯೆಯ ತಂದೆ ಯಾರು ?

ಉತ್ತರ : ಭಾನುವಂತ

20) ಸುಮಿತ್ರೆಯ ತಂದೆ ಯಾರು ?

ಉತ್ತರ: ಶೂರರಾಜ

21) ಕೈಕೆಯ ತಂದೆ ಯಾರು?

ಉತ್ತರ : ಅಶ್ವಪತಿ ರಾಜ

22) ದಶರಥನು  ಪ್ರಾಣಿಯನ್ನು ಕೊಲ್ಲಲೆಂದು  ಹುಡಿದ್ದ ಬಾಣ ಯಾರಿಗೆ ನಾಟಿತು ?

ಉತ್ತರ : ಶ್ರವಣಕುಮಾರ

23) ದಶರಥನಿಗೆ ಪುತ್ರವಿರಹದಿಂದ ಸಾಯುವಂತೆ ಶಾಪ ನಿಡಿದ್ದು ಯಾರು ?

ಉತ್ತರ : ಶ್ರವಣಕುಮಾರನ ವೃದ್ದ ತಂದೆ ತಾಯಿ

24) ದಶರಥನು ಸಂತಾನದ ಅಪೆಕ್ಷಯಿಂದ ಮಾಡಿದ ಯಾಗ ಯಾವುದು ?

ಉತ್ತರ : ಪುತ್ರಕಾಮೇಷ್ಟಿ ಯಾಗ

25) ಪುತ್ರ ಕಾಮೇಷ್ಟಿ ಯಾಗವನ್ನು ಯಾರು ನೆರವೇರಿಸಿದರು?

ಉತ್ತರ : ಶೃಂಗಿ ಋಷಿಗಳು

26) ಪುತ್ರಕಾಮೇಷ್ಟಿ ಯಾಗದ ಕೊನೆಯಲ್ಲಿ ಸಶರೀರವಾಗಿ ದರ್ಶನ ಕೊಟ್ಟಿದ್ದು ಯಾರು? 

ಉತ್ತರ : ಅಗ್ನಿದೇವ

27) ರಾಮನು ಜನಿಸಿದ್ದು ಯಾವಾಗ ?

ಉತ್ತರ: ಚೈತ್ರಮಾಸದ 9ನೇ ದಿನ

28) ಶ್ರೀರಾಮಚಂದ್ರನ ನಕ್ಷತ್ರ ಯಾವುದು?

ಉತ್ತರ : ಪುನರ್ವಸು

29) ಲಕ್ಷ್ಮಣನು ಯಾವ ನಕ್ಷತ್ರದಲ್ಲಿ ಜನಿಸಿದನು? 

ಉತ್ತರ : ಆಶ್ಲೇಷ ( ಚೈತ್ರ ಶುದ್ಧ ದಶಮಿ)

30) ದಶರಥ ಮಹಾರಾಜನ ರಾಜಗುರು ಯಾರು ?

ಉತ್ತರ : ವಶಿಷ್ಠ ಮಹರ್ಷಿಗಳು

31) ದಶರಥ ಮಹಾರಾಜನ ರಾಜ ಮಂತ್ರಿ ಯಾರು ?

ಉತ್ತರ : ಸುಮಂತ

32) ವಿಶ್ವಾಮಿತ್ರರ ಯಜ್ಞಕ್ಕೆ ಉಪದ್ರವವನ್ನು ಕೊಡುತ್ತಿದ್ದ ರಕ್ಕಸರು ಯಾರು?

ಉತ್ತರ : ತಾಟಕಿ, ಸುಭಾಹು ಹಾಗೂ ಮಾರೀಚ

33) ವಿಶ್ವಾಮಿತ್ರರು ಶ್ರೀರಾಮನಿಗೆ ಉಪದೇಶಿಸಿದ ಎರಡು ವಿದ್ಯೆಗಳು ಯಾವುವು?

ಉತ್ತರ : ಬಲ ಹಾಗೂ ಅತಿಬಲಾ

34) ತಾಟಕಿಯನ್ನು ಕೊಂದಿದ್ದು ಯಾರು?

ಉತ್ತರ : ಶ್ರೀರಾಮ

35) ಸುಬಾಹುವನ್ನು ಕೊಂದಿದ್ದು ಯಾರು?

ಉತ್ತರ : ಲಕ್ಷ್ಮಣ

36) ಸುಮಿತ್ರೆಯ ಅವಳಿ ಮಕ್ಕಳು ಯಾರು?

ಉತ್ತರ : ಲಕ್ಷ್ಮಣ, ಶತ್ರುಘ್ನ

37) ದಶರಥನ ಮಕ್ಕಳಿಗೆ ಶಾಸ್ತ್ರ ವಿದ್ಯೆಯನ್ನು ಕಲಿಸಿದ ಗುರುಗಳು ಯಾರು ? 

ಉತ್ತರ : ಮಹರ್ಷಿ ವಸಿಷ್ಠರು

38) ಕೈಕೆಯಿ ಯಾರ ಮಗಳು?

ಉತ್ತರ : ಕೈಕಯ ರಾಜನ‌ ಮಗಳು

39) ಕೌಶಲ್ಯ ಯಾವ ದೇಶದವಳು ?

ಉತ್ತರ : ಕೋಸಲ ದೇಶ

40) ವಿದೇಹದ ರಾಜಧಾನಿ ಯಾವುದು? 

ಉತ್ತರ : ಮಿಥಿಲೆ

46) ಸೀತಾ ಸ್ವಯಂವರದಲ್ಲಿ ರಾಮನು ಮುರಿದದ್ದು ಯಾವ ಧನಸ್ಸು? 

ಉತ್ತರ : ಶಿವ ಧನಸ್ಸು

47) ಭರತನ ಹೆಂಡತಿ ಯಾರು?

ಉತ್ತರ : ಮಾಂಡವಿ

48) ಶತ್ರುಘ್ನನ ಹೆಂಡತಿ ಯಾರು?

ಉತ್ತರ : ಶೃತಕಿರ್ತಿ

49) ಮಾಂಡವಿ ಮತ್ತು ಶ್ರುತಕೀರ್ತಿ ಯಾರ ಮಕ್ಕಳು?

ಉತ್ತರ : ಕ್ಕುಷದ್ವಜನ ಮಕ್ಕಳು

50) ಪರಶುರಾಮರು ಯಾವ ವಂಶದವರು? 

ಉತ್ತರ : ಭೃಗು ವಂಶ

41) ಜನಕ ಮಹಾರಾಜನ ಪತ್ನಿ ಯಾರು ?

ಉತ್ತರ : ಸುನಯನಾ ದೇವಿ

42) ಜನಕ ಮಹಾರಾಜ ಆಳುತ್ತಿದ್ದ ದೇಶ ಯಾವುದು ? 

ಉತ್ತರ : ವಿದೇಹ

43) ವೈದೇಹಿ ಯಾರು ?

ಉತ್ತರ : ಸೀತಾಮಾತೆ 

44) ಜನಕ ಮಹಾರಾಜನ ಮತ್ತೊಬ್ಬಳ ಮಗಳ ಹೆಸರೇನು ?

ಉತ್ತರ : ಊರ್ಮಿಳಾ

45) ಸೀತೆಯು ಜನಕ ರಾಜನಿಗೆ ಎಲ್ಲಿ ಸಿಕ್ಕಿದ್ದು ?

ಉತ್ತರ : ಭೂಮಿಯಲ್ಲಿ

51)ಅಹಲ್ಯಗೆ ಕಲ್ಲಾಗುವಂತೆ ಶಾಪ ನೀಡಿದ್ದು ಯಾರು ?

ಉತ್ತರ : ಗೌತಮ ಮಹರ್ಷಿಗಳು

52) ಅಹಲ್ಯಯ ಶಾಪ ವಿಮೋಚನೆ ಯಾರಿಂದ ಆಯಿತು?

ಉತ್ತರ: ಶ್ರೀರಾಮನಿಂದ

53) ಅಹಲ್ಯ ಹಾಗೂ ಗೌತಮರ ಮಗನ ಹೆಸರೇನು?

ಉತ್ತರ : ಶತಾನಂದ

54) ಪರಶುರಾಮರು ಏಷ್ಟು ಬಾರಿ ಭುಪ್ರದಕ್ಷಿನೆ ಮಾಡಿ ರಕ್ಕಾಸಗುಣದ ಕ್ಷತ್ರಿಯರನ್ನು ಕೊಂದಿದ್ದರು?

ಉತ್ತರ : 21 ಬಾರಿ

55) ಚಿರಂಜೀವಿಗಳು ಎಷ್ಟು ಮಂದಿ? 

ಉತ್ತರ : 7 ಜನ 

56) ಅಯೋಧ್ಯ ಕಾಂಡ ರಾಮಾಯಣ ಎಷ್ಟನೇ ಭಾಗ?

ಉತ್ತರ : ಎರಡನೆಯ ಭಾಗ

57) ರಾಮಾಯಣದ ಮೊದಲ ಭಾಗದ ಹೆಸರೇನು ?

ಉತ್ತರ : ಬಾಲಕಾಂಡ

58) ದಶರಥನು ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡುವ ಇಚ್ಛೆಯನ್ನು ಮೊದಲು ಹೇಳಿದ್ದು ಯಾರಿಗೆ?

ಉತ್ತರ : ರಾಜಗುರುಗಳಾದ ವಶಿಷ್ಠರಿಗೆ

59) ದೇವೇಂದ್ರನ ಜೊತೆ ಯುದ್ಧ ಮಾಡಿದ ರಾಕ್ಷಸ ಯಾರು ?

ಉತ್ತರ : ಶಂಬರಾಸುರ

60) ಶಂಬಕಾಸುರ ಹಾಗೂ ದೇವೇಂದ್ರನ ನಡುವೆ ಯುದ್ಧವಾದಾಗ ದೇವೇಂದ್ರನ ಪರವಾಗಿ ಯುದ್ದ ಮಾಡಿದ್ದು ಯಾರು?

ಉತ್ತರ : ದಶರಥ ಮಹಾರಾಜ

61) ದೇವೇಂದ್ರ ಹಾಗೂ ಶಂಬರಾಸುರನ ನಡುವಿನ ಯುದ್ಧದಲ್ಲಿ ಗೆದ್ದದ್ದು ಯಾರು ?

ಉತ್ತರ : ದೇವೇಂದ್ರ

62) ಯುದ್ಧದಲ್ಲಿ ಗೆದ್ದ ಖುಷಿಗೆ ಕೈಕೆಯಿಗೆ ದಶರಥನು ಎಸ್ಟು ವರಗಳನ್ನು ಕೊಟ್ಟಿದ್ದನು ?

ಉತ್ತರ: 2

63) ಸುಮಿತ್ರೆಯ ಮಗನಾದ್ದರಿಂದ ಲಕ್ಷ್ಮಣನಿಗೆ ಇದ್ದ ಮತ್ತೊಂದು ಹೆಸರೇನು?

 ಉತ್ತರ : ಸೌಮಿತ್ರಿ

64) ಅಯೋಧ್ಯೆ ಸರಹದ್ದನ್ನು ದಾಟಲು ರಾಮನಿಗಿದ್ದ ಕಾಲಾವಕಾಶ ಎಷ್ಟು? 

ಉತ್ತರ : ಅಂದಿನ ಸೂರ್ಯಾಸ್ತ

65) ಅಯೋಧ್ಯವನ್ನು ದಾಟಿದ ನಂತರ ಮೂವರು ತಲುಪಿದ್ದು ಎಲ್ಲಿ?

ಉತ್ತರ : ಶೃಂಗವೇರಪುರ

66) ಶೃಂಗವೆರಪುರ ಎಲ್ಲಿದೆ ?

ಉತ್ತರ: ಗಂಗಾನದಿಯ ತಟದಲ್ಲಿ

67) ನಿಷಾದದ ರಾಜನ ಹೆಸರೇನು ?

ಉತ್ತರ : ಗುಹ

68) ಗುಹನ ವೃತ್ತಿ ಏನು?

ಉತ್ತರ: ಅವನೊಬ್ಬ ಬೇಡ

69) ರಾಮನೊಂದಿಗೆ ಗುಹನ ಬೇಟಿ ಎಲ್ಲಿ ಆಯಿತು?

ಉತ್ತರ : ಗಂಗಾನದಿಯ ತಟದಲ್ಲಿ ಇಂಗುದಿವೃಕ್ಷದ ಕೆಳಗೆ ಕುಳಿತಿದ್ದಾಗ

70) ಗುಹನಲ್ಲಿ ರಾಮ ಕೇಳಿದ ಸಹಾಯವೇನು ?

ಉತ್ತರ : ಗಂಗೆಯನ್ನು ದಾಟಲು ದೋಣಿ ವ್ಯವಸ್ಥೆ ಮಾಡು ಎಂದು

76) ಬೃಹಸ್ಪತಿಯ ಮಗ ಯಾರು? 

ಉತ್ತರ : ಭಾರದ್ವಾಜ ಋಷಿಗಳು

77) ಭಾರದ್ವಾಜ ಋಷಿಗಳ ಆಶ್ರಮ ಎಲ್ಲಿತ್ತು?

ಉತ್ತರ : ಗಂಗೆ ಹಾಗೂ ಯಮುನೆಯರ ಸಂಗಮದ ಬಳಿ

78) ಭಾರದ್ವಾಜರು ರಾಮನಿಗೆ ಎಲ್ಲಿ ತಂಗಲು ಹೇಳಿದರು? 

ಉತ್ತರ : ಚಿತ್ರಕೂಟ ಪರ್ವತದ ಬಳಿ

79) ದಶರಥನ ಅಂತ್ಯ ಹೇಗಾಯಿತು?

ಉತ್ತರ : ಪುತ್ರ ವಿರಹದಿಂದ

80) ದಶರಥನಿಗೆ ಪುತ್ರ ವಿರಹದಿಂದ ಸಾವು ಬರಲಿ ಎಂದು ಹಿಂದೆ ಶಪೀಸಿದ್ದು ಯಾರು?

ಉತ್ತರ : ಶ್ರವಣಕುಮಾರನ ವೃದ್ಧ ಮಾತಾಪಿತರು.

71) ದೋಣಿ ನಡೆಸುವ ಅಂಬಿಗನ ಹೆಸರೇನು ? 

ಉತ್ತರ : ಕೇವತ

72) ಕೇವತನು ರಾಮನನ್ನು ದೋಣಿ ಹತ್ತಿಸಿಕೊಳ್ಳಲು ನಿರಾಕರಿಸಿದ್ದು ಏಕೆ ?

ಉತ್ತರ : ರಾಮ ಕಾಲಿಟ್ಟ ಕೂಡಲೇ ಅವನ‌ಪಾದದೂಳಿಯಿಂದ ತನ್ನ ದೋಣಿಯೂ ಅಹಲ್ಯೆಯಂತೆ ಹೆಣ್ಣಾಗಿ ಬಿಟ್ಟರೆ ಭಯದಿಂದ

73) ಕೇವತನ ಭಯ ನಿಜವಾದುದೇ?

ಉತ್ತರ : ಇಲ್ಲ

74) ಕೇವತಾ ಭಯಗೊಂಡಂತೆ ನಟಿಸಿದ್ದು ಏಕೆ?

ಉತ್ತರ : ಭಕ್ತಿಯಿಂದ ಪ್ರಭು ರಾಮನ ಪಾದಗಳನ್ನು ತೊಳೆತಯವ ಉದ್ದೇಶದಿಂದ 

75) ದೋಣಿಯಲ್ಲಿ ಹತ್ತಿಸಿಕೊಳ್ಳುವ ಮೊದಲು ಕೇವತನು ಮಾಡಿದ್ದೇನು

ಉತ್ತರ : ಪಾದಗಳನ್ನು ಯೊಳೆದದ್ದು

81) ದಶರಥನ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದು ಯಾರು ?

ಉತ್ತರ : ಭಾರತ 

82) ದಶರಥನ ಅಂತ್ಯದ ನಂತರ ಯಾರಿಗೆ ಪಟ್ಟಾಭಿಷೇಕವಾಯಿತು?

ಉತ್ತರ : ಅಧಿಕೃತವಾಗಿ ಯಾರಿಗೂ ಪಟ್ಟಾಭಿಷೇಕ ವಾಗಲಿಲ್ಲ

83) ಭರತ ಶ್ರೀರಾಮನ ಯಾವ ಸಂಕೇತವನ್ನು ಇಟ್ಟುಕೊಂಡು ರಾಜ್ಯಭಾರ ಮಾಡಿದ?

ಉತ್ತರ : ರಾಮನ ಪಾದುಕೆಗಳು

84) ರಾಮನ ಪಾದುಕೆಗಳನ್ನು ತೆಗೆದುಕೊಂಡು ರಾಜ್ಯಭಾರ ಮಾಡು ಎಂದು ಭರತನಿಗೆ ಸೂಚಿಸಿದ್ದು ಯಾರು?

ಉತ್ತರ : ರಾಜಗುರು ವಶಿಷ್ಠರು

85 ) ಭರತನು ರಾಜ್ಯದ ಆಡಳಿತವನ್ನು ಎಲ್ಲಿದ್ದು ಕೊಂಡೆ ಮಾಡುತ್ತಿದ್ದ? 

ಉತ್ತರ: ನಂದಿಗ್ರಾಮ

101) ಪಂಚವಟಿಯು ಯಾವ ನದಿ ತಿರದಲ್ಲಿ ಇತ್ತು?

ಉತ್ತರ : ಗೋದಾವರಿ

102) ಸಂಪಾತಿ ಎಲ್ಲಿ ವಾಸಿಸುತ್ತಿತ್ತು?

ಉತ್ತರ: ದಕ್ಷಿಣದ ತುದಿಯಲ್ಲಿರುವ ಸರೋವರದ ಬಳಿ

103) ಜಟಾಯು ಶ್ರೀರಾಮನಿಗೆ ತಾನು ಯಾರು ಎಂದು ಪರಿಚಯಿಸಿ ಕೊಂಡಿತು?

ಉತ್ತರ : ದಶರಥನ ಸ್ನೇಹಿತ ಎಂದು

104) ಪುಲಸ್ತ್ಯರು ಯಾರ ಮಗ?

ಉತ್ತರ : ಬ್ರಹ್ಮದೇವರ ಮಾನಸಪುತ್ರರು

105) ಪುಲಸ್ತ್ಯರ ಮಗ ಯಾರು ?

ಉತ್ತರ :  ವಿಶ್ರವಸು

106) ವಿಶ್ರವಸುವಿನ ಪತ್ನಿ ಯಾರು?

ಉತ್ತರ : ಭಾರದ್ವಾಜ ಮಹರ್ಷಿಗಳ ಮಗಳಾದ ದೇವವರ್ಣಿನಿ

107) ವೀಶ್ರವಸುವಿನ ಮಗ ಯಾರು?

ಉತ್ತರ : ವೈಶ್ರವನ

108) ವೈಶ್ರವಣ ಯಾವ ಹೆಸರಿನಿಂದ ಪರಿಚಿತ?

ಉತ್ತರ : ಕುಭೇರ

109) ಕುಬೇರನ ಬಳಿಯಿದ್ದ ವಾಯುವೇಗದ ವಾಹನ ಯಾವುದು?

ಉತ್ತರ : ಪುಷ್ಪಕ ವಿಮಾನ

110) ಕುಬೇರನಿಗೆ ಬ್ರಹ್ಮನ ವರದಿಂದ ಯಾವ ದಿಕ್ಕಿನ ಅಧಿಪತ್ಯ ದೊರಕಿತು?

ಉತ್ತರ : ಉತ್ತರ ದಿಕ್ಕಿನ ಅಧಿಪತ್ಯ

111) ರಾಣನಿಗಿಂತಲು ಮೊದಲು ಲಂಕೆಯನ್ನು ಆಳುತ್ತಿದ್ದ ರಾಜ ಯಾರು?

ಉತ್ತರ : ಕುಭೆರ 

112) ವಿಶ್ರವಸು ಹಾಗು ಕೈಕಸಿಯ ಮಗ ಯಾರು? 

ಉತ್ತರ : ರಾವಣ

113) ಕೈಕಸಿ ಯಾರ ಮಗಳು?

ಉತ್ತರ : ಸುಮಾಲಿ ಎಂಬ ರಾಕ್ಷಸನ ಮಗಳು

 114) ಸುಮಾಲಿಯ ಸೋದರರು ಎಷ್ಟು ಮಂದಿ?

ಉತ್ತರ : ಇಬ್ಬರು ( ಮಾಲಿ, ಮಾಲ್ಯವಂತ) 

115) ಸುಮಾಲಿ, ಮಾಲಿ, ಹಾಗು ಮಾಲ್ಯವಂತರ ತಂದೆ ಯಾರು? 

ಉತ್ತರ: ಸುಖೇಶನೆಂಬ ರಾಕ್ಷಸ

116) ರಾವಣನ ಮೂಲ ಹೆಸರೇನು?

ಉತ್ತರ : ದಶಕಂಠ/ ದಶಾನನ

117) ಬ್ರಹ್ಮದೇವನಲ್ಲಿ ರಾವಣನು ಕೇಳಿದ ವರವೇನು? 

ಉತ್ತರ: ತನಗೆ ಸಾವು ಬರಬಾರದು ಎಂದು

118) ಸಾವೇ ಬರಬಾರದೆಂಬ ವರವನ್ನು ಕೇಳು ಎಂದು ರಾವಣನಿಗೆ ಹೇಳಿಕೊಟ್ಟಿದ್ದು ಯಾರು?

ಉತ್ತರ: ಅವನ ತಾಯಿ ಕೈಕಸಿ ಹಾಗೂ ಅಜ್ಜ ಸುಮಾಲಿ

118) ರಾವಣ ಕೇಳಿದವರ ದೊರೆಯಿತೇ? 

ಉತ್ತರ : ಇಲ್ಲ

119) ರಾವಣನು ಬದಲಿಯಾಗಿ ಕೇಳಿದ ವರ ಯಾವುದು? 

ಉತ್ತರ : ದೇವತೆಗಳು ರಾಕ್ಷಸರು ಯಕ್ಷರು ಗಂಧರ್ವರು ಪ್ರಾಣಿ-ಪಕ್ಷಿಗಳಿಂದ ನನಗೆ ಸಾವು ಬರಬಾರದೆಂದು ಕೇಳಿದ

120) ರಾವಣನು ತನ್ನ ಬೇಡಿಕೆಯಿಂದ ಯಾರನ್ನು ಹೊರಗಿಟ್ಟಿದ್ದ?

ಉತ್ತರ : ಮನುಷ್ಯ

121) ರಾವಣನು ಮನುಷ್ಯರಿಂದ ಸಾವು ಬರಬಾರದೆಂದು ಏಕೆ ಕೇಳಲಿಲ್ಲ? 

ಉತ್ತರ : ಮನುಷ್ಯರಿಗೆ ನನ್ನನ್ನು ಸಂಹರಿಸುವಸ್ಟು ಶಕ್ತಿ ಇರುವುದಿಲ್ಲವೆಂದು ಮನುಷ್ಯರನ್ನು ಕಡೆಗಣಿಸಿದ

122) ಕುಂಬಕರ್ಣ ಬ್ರಹ್ಮದೇವನಲ್ಲಿ ಕೇಳಿದ ವರವೇನು? 

ಉತ್ತರ : ಚೆನ್ನಾಗಿ ನಿದ್ರೆ ಬೇಕು ತುಂಬಾ ನಿದ್ರೆ ಬೇಕು ಎಂದು 

123) ಕುಂಭಕರ್ಣನಿಗೆ ನಿದ್ರಾ ವರವನ್ನು ಅವನ ನಾಲಿಗೆಯಲ್ಲಿ ಕುಳಿತು ಕೇಳಿಸಿದ್ದು ಯಾರು ?

ಉತ್ತರ : ಸರಸ್ವತಿ ದೇವಿ

124) ವಿಭೀಷಣನು ಬ್ರಹ್ಮದೇವನಲ್ಲಿ ಕೇಳಿದ ವರವೇನು?

ಉತ್ತರ : ತನ್ನ ಮನಸ್ಸು ಧರ್ಮದಿಂದ ಎಂದಿಗೂ ವಿಚಲಿತವಾಗದ ಇರಲಿ ಎಂದು ಕೇಳಿದ

125) ವಿಭೀಷಣನಿಗೆ ಬ್ರಹ್ಮದೇವರು ಕೊಟ್ಟ ವರವೇನು?

ಉತ್ತರ : ಧರ್ಮಾತ್ಮ ನಾಗಿರು ಜೊತೆಗೆ ಅಮರತ್ವವನ್ನು ( ಚಿರಂಜೀವಿ) ದಯಪಾಲಿಸಿದ

126) ರಾವಣನಿಗೆ ಕುಬೇರನು ಏನಾಗಬೇಕು? 

ಉತ್ತರ : ಅಣ್ಣ

127) ಬ್ರಹ್ಮನಿಂದ ವರ ಪಡೆದ ರಾವಣನು ಮೊದಲು ಆಕ್ರಮಣ ಮಾಡಿದ್ದು ಯಾರ ಮೇಲೆ ? 

ಉತ್ತರ : ಕುಬೇರನ ಮೇಲೆ

128) ಕುಬೇರನ ಮೇಲೆ ಆಕ್ರಮಿಸಲು ಹೇಳಿದ್ದು ಯಾರು ? 

ಉತ್ತರ : ಕೈಕಸಿ

129) ಕೈಕಸಿಗೆ ಕುಬೇರನ ಮೇಲೆ ಹೊಟ್ಟೆಯುರಿ ಏಕೆ ?

ಉತ್ತರ : ಸವತಿಯ ಮಗನ ಸಂಪತ್ತನ್ನು ನೋಡಿ

130) ಕುಬೇರನಿಂದ ರಾವಣ ವಶಪಡಿಸಿಕೊಂಡಿದ್ದು ಏನನ್ನು

ಉತ್ತರ : ಲಂಕೆ ಮತ್ತು ಪುಷ್ಪಕ ವಿಮಾನ

131) ಮಂಡೋದರಿ ಯಾರ ಮಗಳು ? 

ಉತ್ತರ : ಮಯ ಎಂಬ ರಾಕ್ಷಸನ ಮಗಳು

132) ಮಂಡೋದರಿಯ ತಾಯಿ ಯಾರು?

ಉತ್ತರ : ಹೇಮಾ ಎಂಬ ಅಪ್ಸರೆ

133) ಕುಂಭಕರ್ಣನ ಹೆಂಡತಿ ಯಾರು?

ಉತ್ತರ : ವಿದ್ಯುಜ್ಜಿಹ್ವೆ

134) ವಿಭೀಷಣನ ಪತ್ನಿ ಯಾರು? 

ಉತ್ತರ : ಸುರಮೆ ಎಂಬ ಗಂಧರ್ವ ಕನ್ಯೆ

135) ವಿಭೀಷಣನ ಮಾವ ಯಾರು ? 

ಉತ್ತರ : ಶೈಲೂಷ

136) ಯಾರ ಮಾತಿಗೆ ಬೆಲೆಕೊಟ್ಟು ಲಂಕೆಯನ್ನು ರಾವಣನಿಗೆ ಬಿಟ್ಟುಕೊಟ್ಟನು?

ಉತ್ತರ : ತಂದೆ ವಿಶ್ರವಸುವಿನ ಮಾತಿಗೆ

137) ಕುಬೇರನು ಲಂಕೆಯನ್ನು ಬಿಟ್ಟ ನಂತರ ಎಲ್ಲಿ ನೆಲೆಸಿದನು?

ಉತ್ತರ : ಅಲ್ಕ ನಗರಿಯಲ್ಲಿ

138) ಅಲಕಾ ನಗರಿಯು ಯಾವ ನದಿಯ ತೀರದಲ್ಲಿ ಇತ್ತು ?

ಉತ್ತರ : ಮಂದಾಕಿನಿ

139) ರಾವಣನಿಗೆ ವಾನರರಿಂದ ಸೋಲಾಗಲಿ ಎಂದು ಶಪಿಸಿದ್ದರು ಯಾರು ?

ಉತ್ತರ : ನಂದಿಕೇಶ್ವರ

140) ದಶಾನನಿಗೆ ರಾವಣ ಎಂಬ ಹೆಸರು ಬಂದಿದ್ದು ಯಾರಿಂದ ?

ಉತ್ತರ : ಶಿವನಿಂದ

141) ಕುಬೇರನ ಮಗ ಯಾರು?

ಉತ್ತರ : ನಳಕೂಬರ

142) ಹಿಮ ಪರ್ವತದಲ್ಲಿ 

ತಪಸ್ಸು ಮಾಡುತ್ತಿದ್ದ ಕುಶಧ್ವಜನ ಮಗಳು ಯಾರು?

ಉತ್ತರ : ವೇದವತಿ

143) ವೇದವತಿ ಯಾರ ಅವತಾರ ?

ಉತ್ತರ : ಲಕ್ಷ್ಮೀದೇವಿ

144) ವೇದವತಿಯು ಯಾವ ಅಪೇಕ್ಷೆಯಿಂದ ತಪಸ್ಸು ಮಾಡುತ್ತಿದ್ದಳು ?

ಉತ್ತರ : ಶ್ರೀಹರಿಯನ್ನು ಮದುವೆಯಾಗುವ ಇಚ್ಛೆಯಿಂದ

145) ವೇದವತಿಯನ್ನು ಕಂಡು ಮೋಹಿತನಾದ ರಾಕ್ಷಸ ಯಾರು ? 

ಉತ್ತರ : ರಾವಣ

151) ಶೂರ್ಪಣಕಿಯ ದೊಡ್ಡಮ್ಮನ‌ ಮಕ್ಕಳು ಯಾರು?

ಉತ್ತರ : ಖರ ದೂಷಣರೆಂಬ ರಾಕ್ಷಸರು 

152) ಖರ ದೂಷಣರ ಸಂಹರಿಸಿದ್ದು ಯಾರು ?

ಉತ್ತರ‌: ಶ್ರೀರಾಮ‌

153) ಖರ ದೂಷಣರು ರಾಮ ಲಕ್ಷ್ಮಣರ ಮೇಲೆ ಯುದ್ದಕ್ಕೆ ಬಂದಾಗ ಅವರ ಸಂತತಿ ಎಷ್ಟಿತ್ತು?

ಉತ್ತರ : 14,000

154) 14,000 ರಕ್ಕಸರನ್ನು ಸಂಹರಿಸಿದ್ದು ಯಾರು ? 

ಉತ್ತರ : ಶ್ರೀರಾಮ ಒಬ್ಬನೆ

155) ಖರ ದೂಷಣರ ಸಂಹಾರದ ವಿಷಯವನ್ನು ರಾವಣನಿಗೆ ಮೊದಲು ಹೆಳಿದ್ದು ಯಾರು ? 

ಉತ್ತರ : ಅಕಂಪನ ಎಂಬ ರಾಕ್ಷಸ

146) ವೇದವತಿ ರಾವಣನಿಗೆ ಕೊಟ್ಟ ಶಾಪವೇನು?

ಉತ್ತರ : ಬಲತ್ಕಾರದಿಂದ ಯಾವುದಾದರೂ ಹೆಣ್ಣನ್ನು ಪಡೆಯಲು ಪರ್ಯತ್ನಿಸಿದ ಮರುಕ್ಷಣವೇ ನಿನಗೆ ಸಾವು ಬರಲಿ ಎಂದು ಶಪಿಸಿದ್ದಳು 

147) ವೇದವತಿಯು ಮುಂದಿನ ಜನ್ಮದಲ್ಲಿ ಯಾರಾಗಿ ಹುಟ್ಟಿದ್ದಳು ?

ಉತ್ತರ : ಸೀತೆಯಾಗಿ 

148) ಶೂರ್ಪನಕಿಯ ಪತಿ ಯಾರು?

ಉತ್ತರ : ಕಾಲಕೇಯನೆಂಬ ರಾಕ್ಷಸ‌

149) ಕಾಲಕೇಯನನ್ನು ಕೊಂದಿದ್ದು ಯಾರು ? 

ಉತ್ತರ : ರಾವಣ 

150) ರಾವಣ ಕಾಲಕೇಯನನ್ನು  ಕೊಂದಿದ್ದು ಏಕೆ?

ಉತ್ತರ : ಯುದ್ದ ಮಾಡುವಾಗ ತಪ್ಪಿ ಕಾಲಕೇಯನ‌ ಮೇಲೆ ಅಸ್ತ್ರ   ಪ್ರಯೋಗಿಸಿಬಿಟ್ಟಿದ್ದ

156) ಮಾರಿಚ ಯಾರು ?

ಉತ್ತರ : ರಾವಣನ ಸೋದರ ಮಾವ

157) ಮಾರಿಚನಿಗೆ ಯಾವ ರೂಪ ಧರಿಸಿ ಸೀತೆಯ ಮುಂದೆ ಸುಳಿದಾಡಲು ರಾವಣ ಹೆಳಿದ?

ಉತ್ತರ : ಮಾಯಾಮೃಗದ ರೂಪ

158) ಸೀತೆ ಮಾಯಾಮೃಗವನ್ನು ನೋಡಿ ಏನು ಹೇಳಿದಳು ?

ಉತ್ತರ : ತನಗೆ ಈಗಿಂದೀಗಲೇ ಮಾಯಾಮೃಗ ಬೇಕೆಂದು ಕೆಳಿದಳು 

159) ಮಾರಿಚ ಸಾಯುವ ಮೊದಲು ಏನೆಂದು ಉದ್ಗರಿಸಿದ ?

ಉತ್ತರ : ಹಾ ಲಕ್ಷ್ಮಣ ಹಾ ಸಿತಾ 

160) ಸಿತೆಯನ್ನು ರಾವಣ ಅಪಹರಿಸಿಕೊಂಡು ಹೊಗುವಾಗ ಋಷ್ಯಮೂಕ ಪರ್ವತದ ಮೇಲೆ ಕಂಡದ್ದು ಯಾರನ್ನ?

ಉತ್ತರ : ವಾನರ‌ ಸೈನ್ಯ

161) ಸೀತೆ ತನ್ನ ಆಭರಣಗಳ ಪುಟ್ಟ ಗಂಟನ್ನು ಎಲ್ಲಿ ಎಸೆದಳು?

ಉತ್ತರ : ಋಷ್ಯಮೂಕ ಪರ್ವತದಲ್ಲಿ ಇದ್ದ ವಾನರರ ಕಡೆಗೆ

162) ಯೋಜನಗಳಷ್ಟು ದೂರದವರೆಗೆ ಕೈಗಿಳಿದ್ದ ರಾಕ್ಷಸ ಯಾರು ?

ಉತ್ತರ: ಕಬಂಧ

೧೬೩) ಕಬಂಧನ ತಲೆಯು ಎಲ್ಲಿತ್ತು?

ಉತ್ತರ : ಹೊಟ್ಟೆಯಲ್ಲಿ 

೧೬೪) ಕಬಂಧನ ತಲೆಯು ಹೊಟ್ಟೆಯಲ್ಲಿ ಹೋಗಿ ಸಿಕ್ಕಿಕೊಂಡಿದ್ದಕ್ಕೆ ಕಾರಣವೇನ?

ಉತ್ತರ : ಇಂದ್ರನ ವಜ್ರಾಯುಧದಿಂದ ಹೊಡೆದ ಕಾರಣ

೧೬೫) ಕಬಂಧನನ್ನು ಸಂಹರಿಸಿದ್ದು ಯಾರು?

ಉತ್ತರ : ಶ್ರೀರಾಮ 

೧೬೬) ಪಂಪಾ ಸರೋವರದಲ್ಲಿ  ಆಶ್ರಮದಲ್ಲಿ ರಾಮನಿಗಾಗಿ ಕಾಯುತ್ತಿದ್ದ ವೃದ್ಧ ಭಕ್ತೆ ಯಾರು ?

ಉತ್ತರ : ಶಬರಿ

೧೬೭) ಶಬರಿ ಯಾವ ಆಶ್ರಮದಲ್ಲಿ ರಾಮನಿಗಾಗಿ ಎದಿರು ನೋಡುತ್ತಿದ್ದಳು ?

ಉತ್ತರ : ಮತಂಗ ಮುನಿಯ ಆಶ್ರಮದಲ್ಲಿ

೧೬೮) ಶಬರಿ ರಾಮನಿಗೆ ಏನನ್ನು ತಿನ್ನಲು ನೀಡಿದಳು?

ಉತ್ತರ : ಬಾರಿ ಅಥವಾ ಬೋರೆಹಣ್ಣು

೧೬೯) ಶಬರಿ ಆ ಹಣ್ಣನ್ನು ಕಚ್ಚಿ ತಿಂದು ರುಚಿ ನೋಡಿ ರಾಮನಿಗೆ ಕೊಟ್ಟಿದ್ದು ಏಕೆ ?

ಉತ್ತರ : ಸಿಹಿಯಾದ ಹಣ್ಣುಗಳನ್ನು ಮಾತ್ರವೇ ಅರ್ಪಿಸಬೇಕು ಎಂದು

೧೭೦) ಸೀತೆಯನ್ನು ಹುಡುಕಲು ಶಬರಿ ಹೇಳಿದ ಉಪಾಯವೇನು?

ಉತ್ತರ : ಸುಗ್ರೀವನನ್ನು  ಬೇಟಿಯಾಗುವ ಸಲಹೆ ನೀಡಿದಳು

 ೧೭೧) ಸುಗ್ರಿವ ಎಲ್ಲಿದ್ದ?

ಉತ್ತರ : ಋಷ್ಯಮೂಕ ಪರ್ವತದಲ್ಲಿ.

೧೭೨) ಸುಗ್ರೀವನ ಬಳಿ‌ ಇದ್ದ ರಾಮನ ಪರಮ ಭಕ್ತ ಯಾರು?

ಉತ್ತರ : ಹನುಮಂತ 

೧೭೩) ಹನುಮಂತನ ಇನ್ನಿತರ ಹೆಸರುಗಳೇನು ? 

ಉತ್ತರ : ರಾಮಬಂಟ, ಆಂಜನೆಯ, ಮಾರುತಿ, ವಾಯುಪುತ್ರ, ಅಂಜನಿಪುತ್ರ, ಹನುಮಾನ, ಪವನಪುತ್ರ, ಬಜರಂಗಿ, ಕೆಸರಿ ನಂದನ

೧೭೪) ರಾಮನ ದರ್ಶನ ಆದನಂತರ ಶಬರಿಯು ದೇಹತ್ಯಾಗ ಮಾಡಿದ್ದು ಹೇಗೆ? 

ಉತ್ತರ : ಅಗ್ನಿ ಪ್ರವೇಶದ ಮೂಲಕ

೧೭೫) ಕಿಸ್ಕಿಂಧಾ ಕಂಡದ ಹಿಂದಿನ ಬಾಗ ಯಾವುದು?

ಉತ್ತರ : ಅರಣ್ಯಕಾಂಡ 

೧೭೬) ಹನುಮಂತನ ತಂದೆ ಯಾರು?

ಉತ್ತರ : ಕೆಸರಿ

೧೭೭) ಆಂಜನೆಯ ಯಾರ ವರದಿಂದ ಜನ್ಮತಾಳಿದನು?

ಉತ್ತರ : ವಾಯುದೇವನ ವರದಿಂದ 

೧೭೮) ಹಸಿವೆಯಿಂದ ಹನುಮಂತ ತಿನ್ನಲು ಹೊದ ಹಣ್ಣು‌ ಯಾವುದು?

ಉತ್ತರ : ಕೆಂಪಗಿರುವ ಸೂರ್ಯನನ್ನೇ ಹಣ್ಣೆಂದು ತಿನ್ನಲು ಹೊಗಿದ್ದ

೧೭೯) ಹನುಮಂತನಿಗೆ ವಜ್ರಾಯುಧದಲ್ಲಿ ಪೆಟ್ಟು ಕೊಟ್ಟಿದ್ದು ಯಾರು?

ಉತ್ತರ: ಇಂದ್ರ

೧೮೦) ಹನು ಎಂದರೆ ಅರ್ಥ ಏನು?

ಉತ್ತರ : ದವಡೆ

೧೮೧) ರಾಮ ಲಕ್ಷ್ಮಣರು ಸುಗ್ರೀವನನ್ನು ಕಾಣಲು ಎಲ್ಲಿಗೆ ಬಂದರು?

ಉತ್ತರ : ಋಷ್ಯಮೂಕ ಪರ್ವತ

೧೮೨) ಸುಗ್ರೀವನ ಅಣ್ಣ ಯಾರು? 

ಉತ್ತರ : ವಾಲಿ

೧೮೩) ರಾಮಲಕ್ಷ್ಮಣರನ್ನು ಋಷ್ಯಮೂಕ ಪರ್ವತದಲ್ಲಿ ಬರ ಮಾಡಿಕೊಂಡಿದ್ದು ಯಾರು ?

ಉತ್ತರ: ಬ್ರಾಹ್ಮಣ ರೂಪದಲ್ಲಿದ್ದ ಹನುಮಂತ

೧೮೪) ವಾಲಿ-ಸುಗ್ರೀವರ ತಂದೆ ಯಾರು? 

ಉತ್ತರ: ವೃಕ್ಷ ಶಿರಸು

೧೮೫) ವಾಲಿಗೆ ಋಷ್ಯಮೂಕ ಪರ್ವತಕ್ಕೆ ಕಾಲಿಟ್ಟೊಡನೆ ಮೃತ್ಯು ಬರಲಿ ಎಂದು ಶಪಿಸಿದ್ದು ಯಾರ

ಉತ್ತರ : ಮಾತಂಗ ಮುನಿಗಳು

೧೮೬) ಸುಗ್ರೀವನ ಪತ್ನಿ ಯಾರು? 

ಉತ್ತರ: ರುಮೆ 

೧೮೭) ವಾಲಿಯ ಪತ್ನಿ ಯಾರು?

ಉತ್ತರ : ತಾರಾ

೧೮೮) ತಾರಾಳನ್ನು ಯಾರು?

ಉತ್ತರವ: ತಾರ

೧೮೯) ತಾರಾ ಹಾಗೂ ತಾರ, ಯಾರ ಮಕ್ಕಳು?

ಉತ್ತರ : ಸುಷೇಣನೆಂಬ ವಾನರನ ಮಕ್ಕಳು

೧೯೦) ಸುಗ್ರೀವನು ಸೀತೆಯನ್ನು ಗುರುತಿಸುವುದಕ್ಕಾಗಿ ಏನನ್ನು ರಾಮಚಂದ್ರನಿಗೆ ನೀಡಿದನು?

ಉತ್ತರ : ಆಭರಣದ ಪುಟ್ಟ ಗಂಟನ್ನು ನೀಡಿದ

೧೯೬) ಮಾಯಾವಿಯ ಕಳೆಬರವು ಎಲ್ಲಿತ್ತು?

ಉತ್ತರ: ಋಷ್ಯಮೂಕ ಪರ್ವತದ ಎತ್ತರದ ಒಂದು ಮರದ ಮೇಲೆ ಎಷ್ಟು

೧೯೭) ಮಾಯಾವಿಯ ಕಳೇಬರವನ್ನು ಕಾಲಿನಿಂದ ಒದ್ದು ಯೋಜನೆಗಳಷ್ಟು ದೂರ ಎಸೆದದ್ದು  ಯಾರು?

ಉತ್ತರ: ರಾಮ

೧೯೮) ವಾಲಿ-ಸುಗ್ರೀವರ ಯುದ್ಧದಲ್ಲಿ ಮೊದಲ ದಿನ ಗೆದ್ದದ್ದು ಯಾರು?

ಉತ್ತರ : ವಾಲಿ

೧೯೯) ರಾಮನಿಗೆ ವಾಲಿಯನ್ನು ಮೊದಲ ಯುದ್ಧದಲ್ಲಿ ಕೊಲ್ಲಲು ಏಕೆ ಸಾಧ್ಯವಾಗಲಿಲ್ಲ?

ಉತ್ತರ : ವಾಲಿ ಹಾಗೂ ಸುಗ್ರೀವರು ನೋಡಲು ಒಂದೇ ರೀತಿ ಇದ್ದರು ಎಂಬ ಕಾರಣಕ್ಕೆ!

೨೦೦) ಸುಗ್ರೀವನಿಗೆ ರಾಮನು ಯುದ್ಧದ ಸಮಯದಲ್ಲಿ ಏನನ್ನು ಧರಿಸಲು ಕೊಟ್ಟ ?

ಉತ್ತರ: ತನ್ನ ಕುರರ ಹಾರವನ್ನು ಧರಿಸಲು ಕೊಟ್ಟ

೧೯೧) ಲಕ್ಷ್ಮಣನು ಗುರುತಿಸಿದ ಸೀತೆಯ ಆಭರಣ ಯಾವುದು?

ಉತ್ತರ : ಸೀತಾಮಾತೆಯ ಕಾಲುಂಗುರದಿಂದ

೧೯೨) ಸುಗ್ರೀವನು ವಾಲಿಯನ್ನು ಯಾವ ಸ್ಥಳದಲ್ಲಿ ಯುದ್ಧ ಮಾಡು ಬಾ ಎಂದು ಕರೆದ ? 

ಉತ್ತರ : ಋಷಿ ಮುಖ ಪರ್ವತದ ದಟ್ಟ ಕಾನನದಲ್ಲಿ

೧೯೩) ಕಾಡಿನಲ್ಲಿ ಯುದ್ಧಮಾಡಲು ಕರೆದಿದ್ದು ಏಕೆ?

ಉತ್ತರ : ರಾಮನು ವನವಾಸದಲ್ಲಿ ಇರುವುದರಿಂದ ಅವನು ನಗರ ಪ್ರವೇಶ ಮಾಡುವಂತಿರಲಿಲ್ಲ ಹೀಗಾಗಿ ವಾಲಿಯನ್ನು ಕಾಡಿಗೆ ತರಬೇಕಿತ್ತು

೧೯೪) ವಾಲಿಯು ಯಾವ ರಾಕ್ಷಸ ನಂದಿಗೆ ಒಂದಿಡೀ ವರ್ಷ ಗುಹೆಯಲ್ಲಿ ಕಾದಾಡಿದ್ದ ?

ಉತ್ತರ: ಮಾಯಾವಿ

೧೯೫) ವಾಲಿ ಹಾಗೂ ಮಾಯಾವಿ ಯುದ್ದದ್ದಲ್ಲಿ ಗೆದ್ದದ್ದು ಯಾರು? 

ಉತ್ತರ  : ವಾಲಿ

೨೦೧) ರಾಮನ ಹಾರವನ್ನು ಸುಗ್ರೀವನು ಧರಿಸುವುದರಿಂದ ಆಗುತ್ತಿದ್ದ ಪ್ರಯೋಜನವೇನು?

ಉತ್ತರ: ಹಾರ ದರಿಸಿದವನು ಸುಗ್ರೀವನೆಂದೂ. ಹಾರವಿಲ್ಲದವನು ವಾಲಿ ಎಂದು ರಾಮನಿಗೆ ತಿಳಿಯುತ್ತಿತ್ತು.

೨೦೨) ವಾಲಿಯ ಮಗ ಯಾರು?

ಉತ್ತರ: ಅಂಗದ

೨೦೩? ಶ್ರವಣದಿಂದ ಕಾರ್ತಿಕ ಮಾಸದ ವರೆಗೂ ರಾಮಲಕ್ಷ್ಮಣರು ಯಾವ ಪರ್ವತದಲ್ಲಿ ವಾಸವಿದ್ದರು?

ಉತ್ತರ : ಮಾಲ್ಯವಂತ ಪರ್ವತದಲ್ಲಿ ( ಈಗಿನ ಆನೆಗುಂದಿ ಹತ್ತಿರ ಬರುತ್ತದೆ ಅಂದರೆ ಹಂಪಿಯ ಕ್ಷೇತ್ರ)

೨೦೪) ವಾಲಿ ಹತನಾದ ನಂತರ ಕಿಷ್ಕಿಂದೆಯ ರಾಜನಾಗಿದ್ದು ಯಾರು?

ಉತ್ತರ: ಸುಗ್ರೀವ

 ೨೦೫) ಅಂಗದ ನಿಗೆ ಯಾವ ಪಟ್ಟ ಸಿಕ್ಕಿತು?

ಉತ್ತರ: ಯುವರಾಜನ ಪಟ್ಟ

೨೧೧) ರಾಮನು ಹನುಮಂತನಿಗೆ, ಸೀತೆಗೆ ತಲುಪಿಸಲು ಕೊಟ್ಟ ವಸ್ತು ಯಾವುದು?

ಉತ್ತರ : ತನ್ನ ಉಂಗುರ

೨೧೨) ರಾಮನಿಗೆ ಯಾವ ವಾನರ ಮೇಲೆ ಅಪಾರವಾದ ನಂಬಿಕೆ ಇತ್ತು ?

ಉತ್ತರ : ಆಂಜನೆಯ 

೨೧೩) ಜಾಂಬವಂತ ಯಾರ ತಂಡದಲ್ಲಿ ಇದ್ದ?

ಉತ್ತರ : ಆಂಜನೆಯ

೨೧೪) ವಾಲಿಯ ಮಗ ಯಾವ ತಂಡದಲ್ಲಿದ್ದ?

ಉತ್ತರ : ಆಂಜನೆಯ

೨೧೫) ವಿಂದ್ಯ ಪರ್ವತದ ತಪ್ಪಲಿನ ಗುಹೆಯಲ್ಲಿದ್ದ ಅಪರೂಪದ ಸರೋವರ ಯಾರಿಗೆ ಸೇರಿತ್ತು?

ಉತ್ತರ : ಮಯನೆಂಬ ರಾಕ್ಷಕನಿಗೆ ಸೇರಿತ್ತು.

೨೦೬) ಸೀತೆಯನ್ನು ಹುಡುಕಲು ಎಷ್ಟು ದಿಕ್ಕುಗಳಿಗೆ ವಾನರರನ್ನು ಸುಗ್ರೀವನು ಕಳುಹಿಸಿದನು?

ಉತ್ತರ : ನಾಲ್ಕು ದಿಕ್ಕುಗಳಿಗೆ 

೨೦೭) ಪೂರ್ವದಿಕ್ಕಿಗೆ ಹೋದದ್ದು ಯಾರು?

ಉತ್ತರ :  ವಾನರರ ಮುಖ್ಯಸ್ಥ ವಿನತ

೨೦೮) ಪಶ್ಚಿಮ ದಿಕ್ಕಿಗೆ ಹೋದದ್ದು ಯಾರು?

ಉತ್ತರ : ತಾರಾಳ ತಂದೆ ಸುಷೇಣ

೨೦೯) ಉತ್ತರ ದಿಕ್ಕಿಗೆ ಹೋದದ್ದು ಯಾರು?

ಉತ್ತರ : ಶತಬಲಿ ಎಂಬ ವಾನರ ಮುಖ್ಯಸ್ಥ

೨೧೦) ದಕ್ಷಿಣ ದಿಕ್ಕೆಗೆ ಹೋದದ್ದು ಯಾರು?

ಉತ್ತರ : ಆಂಜನೆಯ

೨೧೬) ಮಯನು ಅತ್ಯಂತ ರಮಣೀಯ ಸರೋವರವನ್ನು ಹಾಗು ಉದ್ಯಾನವನ್ನು ಯಾರಿಗಾಗಿ ನಿರ್ಮಿಸಿದ್ದ?

ಉತ್ತರ: ಹೇಮಾ ಎಂಬ ಅಪ್ಸರೆ ಗಾಗಿ ( ಮಂಡೋದರಿಯ ತಾಯಿ)

೨೧೭) ಇದೀಗ ಮಯನ ಸರೋವರನ್ನು ನೋಡಿಕೊಳ್ಳುತ್ತದ್ದ ಯೋಗಿನ ಯಾರು?

ಉತ್ತರ : ಅಪ್ಸರೆ ಹೇಮಾಳ ಸಖಿಯಾದ ಸ್ವಯಂಪ್ರಭೆ

೨೧೮) ಮಾಹೇಂದ್ರ ಪರ್ವತದ ಗುಹೆಯಲ್ಲಿ ವಾನರರು ಸಂಧಿಸಿದ ವೃದ್ದ ಹದ್ದುಗಳ ರಾಜ ಯರು?

ಉತ್ತರ: ಸಂಪಾತಿ

೨೧೯) ಸಂಪಾತಿ ಯಾರ ಅಣ್ಣ ?

ಉತ್ತರ : ಜಟಾಯು

೨೨೦) ಜಟಾಯು ಹಾಗು ಸಂಪಾತಿಯು ಯಾರ ಮಕ್ಕಳು ?

ಉತ್ತರ : ಅರುಣನ ಮಕ್ಕಳು

೨೨೭) ಸುಂದರಕಾಂಡ ಅವಧಿ ಎಷ್ಟು?

ಉತ್ತರ: ಒಂದು ರಾತ್ರಿಯ ಕಥೆಯಾಗಿದೆ

೨೨೮) ಆಂಜನೇಯನಿಗೆ ಸಿದ್ದಸಿದ್ದ ಅಷ್ಟ ಮಹಾವಿದ್ಯೆಗಳು ಯಾವುವು?

ಉತ್ತರ: ಅನಿಮಾ, ಗರಿಮಾ, ಲಘಿಮಾ, ಮಹಿಮಾ, ಪ್ರಾಪ್ತಿ, ಪ್ರಕಾಮ್ಯ, ಈಶತ್ವ, ಮತ್ತು ವಶತ್ವ

೨೨೯) ಮೈನಾಕನು ಯಾರ ಮಗ?

ಉತ್ತರ: ಹಿಮವಂತನ ಮಗ

೨೨೧) ಅರುಣ ಯಾರು?

ಉತ್ತರ : ಸೂರ್ಯನ ಸಾರಥಿ

೨೨೨) ವೃದ್ಧ ಸಂಪಾತಿಯ ಮಗ ಯಾರು?

ಉತ್ತರ: ಸುಪಾರ್ಶ್ವ

೨೨೩) ಸೂಪರ್ಶ್ವನು ತಂದೆಗೆ ಹೇಳಿದ್ದ ರಹಸ್ಯ ವಿಷಯವೇನು?

ಉತ್ತರ : ಸೀತೆಯನ್ನು ರಾವಣನು ಅಶೋಕವನದಲ್ಲಿ ಕೂಡಿಟ್ಟಿದ್ದನಂಬ ವಿಷಯ ಹೇಳಿದ.

೨೨೪) ಸೀತೆಯ ವಿಷಯ ಸುಪಾರ್ಶ್ವವನಿಗೆ ತಿಳಿದುದ್ದು ಹೇಗೆ ? 

ಉತ್ತರ : ಆಹಾರ ತರಲು ರಾವಣನ ನಗರಿಗೆ ಹೋದಾಗ, ಬಲು ದೂರದಿಂದಲೇ ಅವನ ತೀಕ್ಷ್ಣ ದೃಷ್ಟಿಗೆ ಸೀತೆ ಕಂಡಿದ್ದಳು.

೨೨೬) ಮಾಹೇಂದ್ರ ಪರ್ವತದಿಂದ ಲಂಕೆಗೆ ಎಷ್ಟು ದೂರವಿತ್ತು ? 

ಉತ್ತರ : 100 ಯೋಜನೆಗಳಷ್ಟು

೨೩೦) ಹಿಮವಂತನ ಮಗಳಾಗಿ ಜನಿಸಿದ್ದು ಯಾರು?

ಉತ್ತರ : ಪಾರ್ವತಿದೇವಿಯು ಹೈಮವತಿ ಎಂಬ ಹೆಸರಿನಲ್ಲಿ ಹಿಮವಂತನ ಪುತ್ರಿಯಾಗಿ ಜನಿಸಿದ್ದಳು 

೨೩೧) ಲಂಕೆಗೆ ಹಾರುವಾಗ ಸಾಗರದ ಮಧ್ಯೆ ಹನುಮಂತನಿಗೆ ಎದುರಾಗಿದ್ದು ಯಾರು?

ಉತ್ತರ : ಸಾಗರದೊಳಗೆ ಹುದುಗಿದ್ದ ಮೈನಾಕ ( ಪರ್ವತ)

೨೩೨) ಸರ್ಪಗಳ ತಾಯಿ ಯಾರು?

ಉತ್ತರ : ಸುರಸೆ

೨೩೩) ದೇವತೆಗಳು ರಾಮಭಕ್ತ ಹನುಮನನ್ನು ಪರೀಕ್ಷಿಸಲು ಕೇಳಿಕೊಂಡಿದ್ದು ಯಾರನ್ನು?

ಉತ್ತರ : ಸುರಸೆ

೨೩೪) ಸುರೇಸೆಯು ಹನುಮಂತನ ಮುಂದೆ ಯಾವ ರೂಪದಲ್ಲಿ ಪ್ರತ್ಯಕ್ಷಳಾದಳು?

ಉತ್ತರ : ರಾಕ್ಷಸಿಯ ರೂಪದಲ್ಲಿ

೨೩೫) ಸುರೆಸೆಯು ಹನುಮನಿಗೆ ಏನು ಹೇಳಿದಳು?

ಉತ್ತರ :ನನ್ನ ಬಾಯಿಯೊಳಗೆ ನೀನು ಬಂದು ಬಿಳಬೇಕು ಎಂದಳು.

೨೩೬) ಸುರಸೆಯಿಂದ ತಪ್ಪಿಸಿಕೊಳ್ಳಲು ಹನುಮ ಮಾಡಿದ ಉಪಾಯವೇನು?

ಉತ್ತರ : ನನ್ನ ಬಾಯಿಯೊಳಗೆ ನೀನು ಬಂದು ಬೀಳಬೇಕು ಎಂದಳು

೨೩೭) ರಾಹುವಿನ ತಾಯಿ ಯಾರು?

ಉತ್ತರ : ಸಿಂಹಿಕೆ

೨೩೮) ರಾವಣನು ಸಮುದ್ರದಲ್ಲಿ ಯಾರನ್ನು ಕಾವಲು ನಿಲ್ಲಿಸಿದ್ದನು?

ಉತ್ತರ ‌: ಸಿಂಹಕ್ಕೆಯನ್ನು

೨೩೯)ಸಿಂಹಿಕೆಯ ಕೆಲಸವೇನು?

ಉತ್ತರ ; ಸಮುದ್ರದ ಮೇಲೆ ಹಾರುವ ಯಾವ ವಸ್ತುವಿನ ನೆರಳನ್ನೇ ಆಗಲಿ ತಿಂದು ಬಿಡುವುದು!

೨೪೦) ನೆರಳನ್ನು ತಿಂದಾಗ ಏನಾಗುತ್ತದೆ?

ಉತ್ತರ: ನೆರಳಿನೊಂದಿಗೆ ಆ ವ್ಯಕ್ತಿಯೂ/ ವಸ್ತುವೂ ಸಿಂಹಿಕೆಯ ಬಾಯಿಯೊಳಗೆ ಬಂದು ಬೀಳುತ್ತದೆ.

೨೪೧) ಸಿಂಹಿಕೆ ಹನುಮಾನ ನೆರಳನ್ನು ನುಂಗಿದಳೇ?

ಉತ್ತರ : ಹೌದು. ನೆರಳಿನ ಜೊತೆಗೆ ಹನುಮನು ಅವಳ ಬಾಯಿಗೆ ಬಿದ್ದ

೨೪೨) ಹನುಮನ ನುಂಗಿದ ಸಿಂಹಿಕೆಯ ಗತಿ ಏನಾಯಿತು?

ಉತ್ತರ : ಸಿಂಹಿಕೆಯ ಬಾಯಿಗೆ ಬಿದ್ದ ಹನುಮ ತೋಳ ಹೊಟ್ಟೆಯನ್ನು ಸೇರಿ ಬಲು ದೊಡ್ಡದಾಗಿ ಬೆಳೆದು ಹೊಟ್ಟೆಯನ್ನು ಸೀಳಿ ಹೊರಬಂದ

೨೪೩) ಲಂಕೆಗೆ ಬಂದ ಹನುಮ ತನ್ನ ಪಾದಗಳನ್ನು ಮೊದಲ ಬಾರಿಗೆ ಎಲ್ಲಿ ಉರಿದ?

ಉತ್ತರ : ತ್ರೀಕೂಟದ ಗಿರಿಶಿಖರದಲ್ಲಿ

೨೪೪) ಲಂಕೆಯ ಪುರ ದೇವತೆ ಯಾರು ? 

ಉತ್ತರ : ಲಂಕಿಣಿ

೨೪೫) ಹನುಮನನ್ನು ಕಂಡ ಲಂಕಿಣಿ ಯಾವ ಪ್ರಶ್ನೆ ಕೇಳಿದಳು?

ಉತ್ತರ: ಅಪ್ಪಣೆಯಿಲ್ಲದೆ ರಾತ್ರಿಯ ವೇಳೆ ಲಂಕೆಗೆ ನುಸುಳುತ್ತಿರುವ ನೀನು ಯಾರು ಎಂದಳು

೨೪೬) ಹನುಮಾನ್ ಲಂಕಿಣಿಯನ್ನು ಹೇಗೆ ಶಿಕ್ಷಿಸಿದ?

ಉತ್ತರ : ಅವಳನ್ನು ಸ್ಪರ್ಶಿಸಿದನಷ್ಟೇ ಅಷ್ಟಕ್ಕೇ ಲಂಕಿಣಿಯ ಬೆನ್ನು ಮೂಳೆ ಮುರಿದಂತಾಯಿತು.

೨೪೭) ಲಂಕಿಣಿಗೆ ಬ್ರಹ್ಮದೇವನು ಏನೆಂದು ಎಚ್ಚರಿಸಿದ್ದ?

ಉತ್ತರ: ಲಂಕೆಗೆ ವಾನರನೊಬ್ಬ ಕಾಲಿಟ್ಟ ಕ್ಷಣದಿಂದ ಲಂಕೆಯ ಅವನತಿ ಆರಂಭವಾಗುತ್ತದೆ ಎಂದು.

೨೪೮) ಲಂಕೆಯಲ್ಲಿ ಹರಿನಾಮ ಸ್ಮರಣೆ ಮಾಡುತ್ತಿದ್ದ ಏಕೈಕ ವ್ಯಕ್ತಿ ಯಾರು?

ಉತ್ತರ : ವಿಭಿಷಣ

೨೪೯) ರಾವಣನ ಅರಮನೆಯಲ್ಲಿ ಯಾರನ್ನು ಕಂಡ ಹನುಮಂತನು ಸೀತಾದೇವಿಯನ್ನು ತಪ್ಪಾಗಿ ತಿಳಿದು?

ಉತ್ತರ : ಮಂಡೋದರಿ

೨೫೦) ಸೀತೆಯು ರಾವಣನೊಡನೆ ಮಾತನಾಡುವಾಗ ಹೇಗೆ ಮಾತನಾಡುತ್ತಿದ್ದಳು?

ಉತ್ತರ : ಒಂದು ಹುಲ್ಲುಕಡ್ಡಿಯನ್ನು ಮುಂದಿಟ್ಟುಕೊಂಡು ಅದರೊಂದಿಗೆ ಮಾತನಾಡುತ್ತಿದ್ದಳು.

೨೫೧) ಭೂಮಿಯ ಮೇಲಿನ ಅತ್ಯಂತ ಸುಂದರವಾದ ಉದ್ಯಾನವನ ಯಾವುದಾಗಿತ್ತು?

ಉತ್ತರ : ರಾವಣನ ಅಶೋಕವನ

೨೫೨) ದೇವಲೋಕದ ಅತ್ಯಂತ ಸುಂದರವಾದ ಯಾವುದು?

ಉತ್ತರ : ನಂದನವನ

೨೫೩) ನಂದನವನ ಯಾರಿಗೆ ಸೇರಿದ್ದು?

ಉತ್ತರ : ದೇವೇಂದ್ರನಿಗೆ 

೨೫೪) ಅಶೋಕವನದಲ್ಲಿ ಯಾವೆಲ್ಲ ಮರಗಳು ಇದ್ದವು?

ಉತ್ತರ : ಭೂಮಿಯ ಮೇಲಿನ ಅತ್ಯಂತ ರಮಣೀಯ ಮರಾಗಿಡಗಳೆಲ್ಲವೂ ಅಶೋಕವನದಲ್ಲಿತ್ತು 

೨೫೫) ಆಂಜನೇಯನ ಅಶೋಕವನಕ್ಕೆ ಕಾಲಿಟ್ಟಾಗ ಆ ಪರಿಸರದ ತುಂಬೆಲ್ಲ ಯಾವ ಬಣ್ಣದ ಹೂವುಗಳು ಅರಳಿದ್ಧವು?

ಉತ್ತರ :ಬಿಳಿಯ ಬಣ್ಣದ ಹೂಗಳು  

೨೫೬) ಆಂಜನೇಯನಿಗೆ ಬಿಳಿಯ ಬಣ್ಣದ ಹೂಗಳು ಹೇಗೆ ಕಂಡವು?

ಉತ್ತರ : ಬಿಳಿಯ ಬಣ್ಣದ ಹೂಗಳು 

೨೫೭) ಬಿಳಿಯ ಹೂಗಳು ಕೆಂಪಗೆ ಕಂಡುದು ಹೇಗೆ?

ಉತ್ತರ : ರಾವಣನ ಮೇಲೆ ಕೆಂಡದಂಥಾ ಕೋಪದಿಂದ ಆಂಜನೆಯನಿಗೆ ಬಿಳಿಯ ಹೂಗಳೆಲ್ಲವೂ ಕೆಂಪಗೆ ಕಂಡಿದ್ದವು.

೨೫೮) ಸೀತಾಮಾತೆ ಅಶೋಕವನದಲ್ಲಿ ಏನನ್ನು ಸೇವಿಸುತ್ತಿದ್ದಳು ?

ಉತ್ತರ : ಕೇವಲ ಹಾಲನ್ನವನ್ನು 

೨೫೯) ಹಾಲನ್ನವನ್ನು ಯಾರು ಕಳಿಸುತ್ತಿದ್ದರು?

ಉತ್ತರ‌: ಸ್ವತಃ ದೇವೆಂದ್ರ

೨೬೦) ಸೀತೆಯು ಹಾಲನ್ನವನ್ನು ಎಷ್ಟು ಭಾಗಮಾಡಿ ಸೇವಿಸುತ್ತಿದ್ದಳು?

ಉತ್ತರ : ರಾಮ ಹಾಗೂ ಲಕ್ಷ್ಮಣರಿಗೆ ಎರಡು ಭಾಗ ಮಾಡಿ, ಅದರಲ್ಲಿ ರಾಮನ ಪಾಲಿನ ಅರ್ಧ ಹಾಲನ್ನವನ್ನು ಮಾತ್ರ ಸೇವಿಸುತ್ತಿದ್ದಳು.

೨೬೧) ಸೀತೆಯ ಹಾಲನ್ನವನ್ನು ಭಾಗ ಮಾಡಿ  ಸೇವಿಸುವುದನ್ನು ಕಂಡ ಪಕ್ಷಿ ಯಾವುದು ?

ಉತ್ತರ: ಹದ್ದುಗಳ ರಾಜ ಸಂಪಾತಿಯ ಮಗ ಸುಪಾರ್ಶ್ವ

೨೬೨) ದುಃಖತಪ್ತ ಸೀತೆ ಇದ್ದದ್ದು ಎಲ್ಲಿ ?

ಉತ್ತರ: ಅಶೋಕವನದಲ್ಲಿ

೨೬೩) ಅಶೋಕವನ ಎಂದರೇನು?

ಉತ್ತರ: ಶೋಕವೇ ಇಲ್ಲದ ಅತ್ಯಂತ ಸುಂದರ ಉಧ್ಯಾನವನವೇ ಅಶೋಕವನ

೨೬೪) ಅಶೋಕವೃಕ್ಷಕ್ಕಿರುವ ಇಮ್ನೊಂದು ಹೆಸರೇನು?

ಉತ್ತರ : ಶಿಂಶಪಾವೃಕ್ಷ

೨೬೫) ಸೀತಾಮಾತೇಯ ಸುತ್ತಲಿದ್ದ ರಾಕ್ಷಸಿಯರು ಯಾರು ಯಾರು?

ಉತ್ತರ : ತ್ರಿಜಟೆ,ಭೂರಿಜಟೆ, ಜಟೆ,ವಿಘಸೆ,ಅಯೋಮುಖಿ, ವಿಕಟೆ, ಚಂಡೊದರಿ,ವಿನತೆ, ಅಶ್ವಮುಖಿ.

೨೬೬) ರಕ್ಕಸಿಯರಲೆಲ್ಲಾ ಸಾಧು ಸ್ವಭಾವದ ರಕ್ಕಸಿ ಯಾರು?

ಉತ್ತರ : ತ್ರಿಜಟೆ ಎಂಬ ವೃದ್ದೆ.

೨೬೭) ಆಂಜನೇಯನು ಅಶೋಕ ವನವನ್ನು ಪ್ರವೇಶಿಸಿದ ಕೂಡಲೇ ಸೀತೆಯೊಂದಿಗೆ ಯಾಕೆ ಮಾತನಾಡಲಿಲ್ಲ?

ಉತ್ತರ : ಅವನಿಗೆ ಯಾರೋ ಬರುತ್ತಿರುವ ಸುಳಿವು ಸಿಕ್ಕಿತು.

೨೬೮) ಅಶೋಕವನಕ್ಕೆ ಆವೇಳೆ ಹೊತ್ತಿನಲ್ಲಿ ಪ್ರವೇಶಿಸಿದ್ದು ಯಾರು? ?

ಉತ್ತರ : ರಾವಣನು ಪತ್ನಿ ಸಮೇತ ಪ್ರವೇಶಿಸಿದ್ದ.

೨೬೯) ರಾವಣನನ್ನು ಕಂಡ ಆಂಜನೇಯ ಮಾಡಿದ್ದೇನು?

ಉತ್ತರ : ಅಶೋಕ ವೃಕ್ಷದ ಮೇಲೆ ಸದ್ದಿಲ್ಲದೇ ಕುಳಿತುಕೊಂಡ.

೨೭೦) ರಾವಣನು ಸಿತೆಯನ್ನು ಕಂಡು ಹೇಳಿದ್ದೆನು? 

ಉತ್ತರ : ಇನ್ನೊಂದು ತಿಂಗಳೊಳಗೆ ನನ್ನವಳಾಗದಿದ್ದರೆ ನಿನ್ನನ್ನು ಕೊಲ್ಲುವೆ ಎಂದ.

೨೭೬) ಅಚ್ಚರಿಯಿಂದ ಮರದ ಮೇಲೆ ನೋಡಿದ ಸೀತಾಮಾತೆಯ ಕಣ್ಣಿಗೆ ಕಂಡದ್ದು ಯಾರು?

ಉತ್ತರ : ಕೈಜೋಡಿಸಿ ಕುಳಿತಿದ್ದ ಗೇಣುದ್ದದ ಆಂಜನೇಯ

೨೭೭) ಸೀತಾಮಾತೆಯು ಆಂಜನೆಯನನ್ನು ಯಾರೆಂದು ತಿಳಿದಳು?

ಉತ್ತರ : ಮಾಯಾವಿ ರಾವಣನೇ ಈ ರೂಪದಲ್ಲಿ ಬಂದಿದ್ದಾನೆ ಎಂದು ತಿಳಿದಳು

೨೭೮) ಹನುಮನು ತನ್ನೊಂದಿಗೆ ಸೀತಾಮತೆಯನ್ನು ಕರೆದೊಯ್ಯುವೆ ಎಂದಾಗ ಸೀತೆ ಏನು ಹೇಳಿದಳು ?

ಉತ್ತರ : ಶ್ರೀರಾಮನು ಲಂಕಾಧೀಶ ನನ್ನು ಸದೆಬಡಿದೇ ನನ್ನನ್ನು ಕೊಂಡೊಯ್ಯುವುದು ಧರ್ಮ ಎಂದಳು.

೨೭೯) ಸೀತಾಮಾತೆಗೆ ಹನುಮನು ಕೊಟ್ಟ ಆಭರಣ ಯಾವುದು?

ಉತ್ತರ : ಶ್ರೀರಾಮಚಂದ್ರನ ಮುದ್ರಾ ಉಂಗುರ

೨೮೦) ಸೀತಾಮಾತೆ ರಾಮಚಂದ್ರನಿಗೆ ಕೊಡು ಎಂದು ಹೇಳಿ ಕೊಟ್ಟ ಆಭರಣ ಯಾವುದು ?

ಉತ್ತರ : ತನ್ನ ನೆತ್ತಿಯ ಮೆಲಿದ್ದ ಚೂಡಾಮಣಿ.

೨೭೧) ರಾವಣನಿಗೆ ಸೀತೆಯ ಯಾವ ಉತ್ತರವನ್ನು ಕೊಟ್ಟಳು?

ಉತ್ತರ : ನನ್ನ ರಾಮಪ್ರಭು ಬಂದೇ ಬರುತ್ತಾನೆ. ನಿನ್ನನ್ನು ಕೊಂದು ನನ್ನನ್ನು ಕರೆದೊಯ್ಯುತ್ತಾನೆ ಎಂದಳು 

೨೭೨) ಕುಪಿತ ರಾವಣನು ನಿರ್ಗಮಿಸಿದ ನಂತರ ರಕ್ಕಸಿಯರೆಲ್ಲ ನಿದ್ರೆಗೆ ಶರಣಾದದ್ದು ಹೇಗೆ ?

ಉತ್ತರ: ನಿದ್ರಾದೇವಿಯ ಉಪಕಾರದಿಂದ ರಕ್ಕಸಿಯರಿಗೆಲ್ಲಾ ನಿದ್ರೆ ಆವರಿಸಿತು

೨೭೪) ಆಂಜನೆಯನು ಅಶೋಕವನಕ್ಕೆ ಬಂದಾಗ ಅವನ ಗಾತ್ರ ಎಷ್ಟಿತ್ತು?

ಉತ್ತರ : ಗೇಣುದ್ದ ಮಾತ್ರ 

೨೭೫) ಸೀತಾಮಾತೆಯ ಕಿವಿಗೆ ಆಂಜನೆಯನ ಯಾವ ನುಡಿಗಳು ಬಿದ್ದವು?

ಉತ್ತರ : ರಾಮನ ಬಗ್ಗೆ ಭಕ್ತಿಯಿಂದ ಯಾರೋ ಗುನುಗುತ್ತಿರುವುದು ಸೀತಾಮಾತೆಯ ಕಿವಿಗೆ ಬಿದ್ದವು.

೨೮೧) ಹೊರಡುತ್ತೆನೆಂದು ಹೊರಟ ಹನುಮ ಅಶೋಕವನವನ್ನು  ದ್ವಂಸ ಏಕೆ ಮಾಡಿದ ?

ಉತ್ತರ: ತನ್ನ ಪರಾಕ್ರಮ ರಾವಣನಿಗೆ ತಿಳಿಯಲಿ ಎಂದು!

೨೮೨) ರಾವಣನು ಅಂಕೆಯಿಲ್ಲದ ಕಪಿಯನ್ನು ಸೆರೆಹಿಡಿದು ತಾ ಎಂದು ಯಾರನ್ನು ಕಳುಹಿಸಿದ?

ಉತ್ತರ : ತನ್ನ ಕಿರಿಯ ಪುತ್ರ ಅಕ್ಷಕುಮಾರನನ್ನು ಕಳಿಸಿದ

೨೮೩) ಅಕ್ಷಕುಮಾರನ ಸ್ಥಿತಿ ಏನಾಯಿತು?

ಉತ್ತರ: ಆಂಜನೆಯನ ಕೈಯಲ್ಲಿ ಸಂಹಾರವಾದ 

೨೮೪) ರಾವಣನ ಮತ್ತೊಬ್ಬ ಮಗನ ಹೆಸರೇನು?

ಉತ್ತರ: ಇಂದ್ರಜಿತ್

೨೮೫) ಇಂದ್ರಜೀತ್ ಎಂಬ ಹೆಸರು ಅವನಿಗೆ ಏಕೆ ಬಂತು?

ಉತ್ತರ : ಇಂದ್ರನನ್ನೇ ಸೋಲಿಸಿದ ಕೀರ್ತಿಯಿಂದ ಅವನಿಗೆ ಆ ಹೆಸರು ಬಂತು