ಸಾಹಿತ್ಯ:-ಡಾ||ಎಚ್.ಎಸ್.ವೆಂಕಟೇಶ ಮೂರ್ತಿ
ಸಂಗೀತ:-ಚಿದಂಬರ ಕಾಳಮಂಜಿ
ಗಾಯನ:-ನಮ್ರತಾ ಪ್ರಸಾದ್
ನೀನೊಬ್ಬನೇ ಬಾರೊ
ಜೊತೆಗೆ ಕರೆತರಬೇಡ
ಕಹಿ ನೆನಪನು
ಕೆಂಗುಲಾಬಿಯ ಜೊತೆಗೆ
ಯಾರು ತರುವರು ಹೇಳೋ
ಮುಳ್ಳುಗಳನು ||
ನೀನೊಬ್ಬನೇ ಬಾರೋ
ಜೊತೆಗೆ ಕರೆತರಬೇಡ ಕುಲದ ಹೆಸರು
ನೀನೊಬ್ಬ ಬಾ ಸಾಕು
ನೀರು ತರುವರು ಜೊತೆಗೆ ಹೊತ್ತು
ತರುವರೋ ತಳದ ಕೆಸರು ||
ನೀನೊಬ್ಬ ಬಾ ಸಾಕು
ನನಗೆ ಬೇಕಾಗಿಲ್ಲ ಬೇರೆ ಗೊಡವೆ
ಹುಟ್ಟುವಾಗಲೇ ಯಾರು ತೊಟ್ಟು ಬಂದರೋ ಹೇಳೋ,ವಸ್ತ್ರ ಒಡವೆ
ನೀನೊಬ್ಬನೇ ಬಾರೋ! ||
ನೀನೊಬ್ಬ ಬಾ ಸಾಕು
ನನಗೆ ನೀನೇ ಬೇಕು ,ಅಷ್ಟು ಸಾಕು
ನಾವೆಂಬ ನಾವೆಗೆ
ನಾವೇ ನಾವಿಗರಾಗಿ
ತೊರೆಯನ್ನು ಹಾಯಬೇಕು ||