ಸೇತುಬಂಧ 2023-24




ಶಾಲಾ ಶೈಕ್ಷಣಿಕ ಯೋಜನೆ

(SAP PDF FORMATS)



DOWNLOAD PDF HERE


***



DOWNLOAD PDF


***


2023-24 ನೇ ಸಾಲಿನ 1 ನೇ ತರಗತಿಯಿಂದ 9 ನೇ ತರಗತಿ ವರೆಗೆ ಪೂರ್ವ ಮತ್ತು ಸಾಫಲ್ಯ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು....



DOWNLOAD HERE

ಸೇತುಬಂಧ ನಡೆಸುವ ಅವಧಿ : 

ನಲಿಕಲಿ - 

01/06/2023 ರಿಂದ 30/06/2023 ವರೆಗೆ


4  ರಿಂದ 9 ನೇ ತರಗತಿ :

01/06/2023 ರಿಂದ 15/06/2023 ವರೆಗೆ



***


2023-24 ನೇ ಸಾಲಿನ ಸೇತುಬಂಧ ಶಿಕ್ಷಣವನ್ನು ಅನುಷ್ಠಾನ ಮಾಡುವ ಸುತ್ತೋಲೆ.....



***

ಸೇತುಬಂಧ ಸಾಹಿತ್ಯಗಳು

Click here to download

***

2023-24 ನೇ ಸಾಲಿನ ಸೇತುಬಂಧ ಸಾಹಿತ್ಯವನ್ನು ಇಲಾಖೆಯ ಮೂಲಕ ನೀಡಲಾಗಿದೆ. ಈ ಕೆಳಗಿನ ಲಿಂಕ್ ಮೂಲಕ 1 ರಿಂದ 10 ನೇ ತರಗತಿಯ ಸಾಹಿತ್ಯವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ...



CLICK HERE TO DOWNLOAD 


ಸೇತುಬಂಧ ಕಾರ್ಯಕ್ರಮ ಹೇಗೆ ಮಾಡಬೇಕು ?

    ಹಿಂದಿನ ತರಗತಿಯಿಂದ ಉತ್ತೀರ್ಣನಾಗಿ ಬಂದ ವಿದ್ಯಾರ್ಥಿಯಲ್ಲಿ ಈಗಿನ ತರಗತಿಯ ಕಲಿಕೆಗೆ ಬೇಕಾದ ಕನಿಷ್ಠ ಸಾಮರ್ಥ್ಯ/ಕಲಿಕಾಂಶಗಳು ಎಷ್ಟರಮಟ್ಟಿಗೆ ಇವೆ ಎಂಬುದನ್ನು ದೃಢಪಡಿಸಿಕೊಳ್ಳುವ ಚಟುವಟಿಕೆಯ ಜೊತೆಗೆ ಈಗ ಕಲಿಯುತ್ತಿರುವ ತರಗತಿಗೆ ಬೇಕಾದ ಸಾಮರ್ಥ್ಯ/ಕಲಿಕಾಂಶಗಳನ್ನು ಸಿದ್ಧಗೊಳಿಸುವ ಚಟುವಟಿಕೆಯೇ ಸೇತುಬಂಧ ಕಾರ್ಯಕ್ರಮ. 

     ಈ ಕಾರ್ಯಕ್ರಮವನ್ನು ಜೂನ್ ೨೫ ರವರೆಗೆ ನಡೆಸುವುದು.


ಸೇತುಬಂಧ ಕಾರ್ಯಕ್ರಮದಲ್ಲಿ ಒಟ್ಟು 6 ಹಂತಗಳು



01 - ನೈದಾನಿಕ ಪರೀಕ್ಷೆ / ಪೂರ್ವ ಪರೀಕ್ಷೆ

02 - ಉತ್ತರಗಳ ವಿಶ್ಲೇಷಣೆ

03 - ದೋಷನಿಧಾನ 

04 - ಪರಿಹಾರ ಬೋಧನೆ & ಅದರ ಯೋಜನೆ

05 - ಸಾಫಲ್ಯ ಪರೀಕ್ಷೆ 

06 - ಉತ್ತರಗಳ ವಿಶ್ಲೇಷಣೆ 

07 - ಮುಂದಿನ ಕ್ರಮ


ಹಂತ 1. ನೈದಾನಿಕ ಪರೀಕ್ಷೆ / ಪೂರ್ವ ಪರೀಕ್ಷೆ :

ವಿದ್ಯಾರ್ಥಿಯು ಪ್ರಸಕ್ತ ಸಾಲಿನಲ್ಲಿ ಓದುತ್ತಿರುವ ತರಗತಿಯ ಕಲಿಕೆಗೆ ಅವಶ್ಯವಾಗಿ ಬೇಕಾದ ಸಾಮರ್ಥ್ಯ/ಕಲಿಕಾಂಶಗಳು ವಿದ್ಯಾರ್ಥಿಯಲ್ಲಿ ಎಷ್ಟರಮಟ್ಟಿಗೆ ಸಾಧನೆಯಾಗಿವೆ ಎಂಬುದನ್ನು ಪತ್ತೆಹಚ್ಚುವ ಹಂತವಿದು.


ಪ್ರಸಕ್ತ ತರಗತಿಯ ಕಲಿಕೆಗೆ ಪೂರಕವಾಗಿ ವಿದ್ಯಾರ್ಥಿ ಗಳಿಸಿರಬೇಕಾದ ಕನಿಷ್ಟ ಸಾಮರ್ಥ್ಯ/ಕಲಿಕಾಂಶಗಳ ಪಟ್ಟಿ. 

ಕನಿಷ್ಠ 1೦ ಸಾಮರ್ಥ್ಯಗಳ ಗಳಿಕೆಯನ್ನು ಪರೀಕ್ಷಿಸಲು ಒಂದು ಪ್ರಶ್ನೆಪತ್ರಿಕೆ ರಚನೆ. 

ಮೌಖಿಕ ಪರೀಕ್ಷೆಗೂ ಅವಕಾಶದ ವ್ಯವಸ್ಥೆ. 

ಇಂತಿಷ್ಟೇ ಪ್ರಶ್ನೆಗಳಿರಬೇಕೆಂಬ ನಿರ್ಬಂಧವಿಲ್ಲ. 

ಅಂಕಗಳ ಆಧಾರದಿಂದ ರಚನೆಯಾಗಿರುವುದಿಲ್ಲ. 

ನೈದಾನಿಕ ಪರೀಕ್ಷೆ ಮಟ್ಟದ್ದೆ ಇನ್ನೊಂದು ಪ್ರಶ್ನೆಪತ್ರಿಕೆ ರಚಿಸಿಕೊಳ್ಳಬೇಕು.


ಹಂತ  2. ಉತ್ತರಗಳ ವಿಶ್ಲೇಷಣೆ


ವಿಶ್ಲೇಷಣೆಯಲ್ಲಿ ಪ್ರತಿ ವಿದ್ಯಾರ್ಥಿಯ ಸರಿ ಉತ್ತರವೆಷ್ಟು, ತಪ್ಪು ಉತ್ತರವೆಷ್ಟು ಎಂಬುದನ್ನು ದಾಖಲಿಸಬೇಕು. 

ವಿಶ್ಲೇಷಣೆಯಲ್ಲಿ ಸರಿ ಉತ್ತರಗಳಿಗೆ “A” ಎಂದು ತಪ್ಪು ಉತ್ತರಗಳಿಗೆ “B” ಎಂದು ಪ್ರಶ್ನೆಗಳ ಸಂಖ್ಯೆ ಕೆಳಗೆ ನಮೂದಿಸಬೇಕು. 


ಹಂತ 3. ದೋಷನಿಧಾನ


ವಿಶ್ಲೇಷಣೆ ಬಳಿಕ ಪ್ರತೀ ವಿದ್ಯಾರ್ಥಿಯ ಕಲಿಕಾ ದೋಷಗಳನ್ನು ಅಥವಾ ಕಲಿಕೆಯಲ್ಲಿರುವ ಕೊರತೆಗಳನ್ನು ಪತ್ತೆಹಚ್ಚುವ ಹಂತವೇ ದೋಷನಿಧಾನ.


ಹಂತ 4. ಪರಿಹಾರ ಬೋಧನೆ & ಅದರ ಯೋಜನೆ


ವಿದ್ಯಾರ್ಥಿಗಳಲ್ಲಿರುವ ಕಲಿಕಾ ಕೊರತೆಯನ್ನು ನೀಗಿಸುವ ಪ್ರಕ್ರಿಯೆಯೇ ಪರಿಹಾರ ಬೋಧನೆ. 

ಪರಿಹಾರ ಬೋಧನೆಗೆ ಸಂಬಂಧಿಸಿದ ಯೋಜನೆಯನ್ನು ತಯಾರಿಸುವುದು.


ಹಂತ 5. ಸಾಫಲ್ಯ ಪರೀಕ್ಷೆ


ಪರಿಹಾರ ಬೋಧನೆ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂಬುದನ್ನು ತಿಳಿಯುವ ಹಂತವೇ ಸಾಫಲ್ಯ ಪರೀಕ್ಷೆ. 

ನೈದಾನಿಕ ಪರೀಕ್ಷೆ ಸಮಯದಲ್ಲಿ ರಚಿಸಿಕೊಂಡಿದ್ದ ಇನ್ನೊಂದು ಪ್ರಶ್ನೆಪತ್ರಿಕೆಯನ್ನು ಇಲ್ಲಿ ಬಳಸಬಹುದು. 

ಕಲಿಕಾ ಕೊರತೆಯಿಲ್ಲದ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ಮಾಡಬಾರದು.


ಹಂತ 6. ಉತ್ತರಗಳ ವಿಶ್ಲೇಷಣೆ


ವಿಶ್ಲೇಷಣೆಯಲ್ಲಿ ಪ್ರತಿ ವಿದ್ಯಾರ್ಥಿಯ ಸರಿ ಉತ್ತರವೆಷ್ಟು, ತಪ್ಪು ಉತ್ತರವೆಷ್ಟು ಎಂಬುದನ್ನು ದಾಖಲಿಸಬೇಕು. 

ವಿಶ್ಲೇಷಣೆಯಲ್ಲಿ ಸರಿ ಉತ್ತರಗಳಿಗೆ “A” ಎಂದು ತಪ್ಪು ಉತ್ತರಗಳಿಗೆ “B” ಎಂದು ಪ್ರಶ್ನೆಗಳ ಸಂಖ್ಯೆ ಕೆಳಗೆ ನಮೂದಿಸಬೇಕು.


ಹಂತ  7. ಮುಂದಿನ ಕ್ರಮ


ಇಷ್ಟೆಲ್ಲಾ ಮಾಡಿದ ಮೇಲೆಯೂ ಕೆಲವು ಮಕ್ಕಳು ನಿರೀಕ್ಷಿತ ಮಟ್ಟ ತಲುಪದೆ ಇರುವ ಮಕ್ಕಳನ್ನು ಗುರುತಿಸಿ ದೈನಂದಿನ ಕಲಿಕಾ ಚಟುವಟಿಕೆಗಳಲ್ಲಿ ಅವರಿಗೆ ವಿಶೇಷ ಗಮನ ನೀಡಬೇಕು.


ಬುನಾದಿ ಸಾಮರ್ಥ್ಯಗಳು

ತರಗತಿ 2 :