ಮೀಸಲಾತಿ ವಿವರ - ಹೊಸ ಪ್ರವರ್ಗಗಳು ಮತ್ತು ಒಳಜಾತಿಯ ಶೇಕಡಾ ಹಂಚಿಕೆ ಪ್ರಮಾಣ

 



















ಬೆಂಗಳೂರು: ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಕೊನೆಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಂಪುಟ ಸಭೆ ಕ್ರಾಂತಿಕಾರಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅಲ್ಲದೇ ಮಹತ್ವದ ಯೋಜನೆಗಳಿಗೆ ಅನುಮೋದನೆಯನ್ನು ನೀಡಲಾಗಿದೆ.
            ಈ ಕುರಿತಂತೆ ಸಚಿವ ಸಂಪುಟ ಸಭೆಯ ಬಳಿಕ ಸ್ವತಹ ಸಂಪುಟ ನಿರ್ಣಯಗಳನ್ನು ಸುದ್ದಿಗೋಷ್ಠಿ ನಡೆಸಿ ಪಂಚಮಸಾಲಿ 2ಎ ಮೀಸಲಾತಿ ವಿಚಾರವಾಗಿ ಮಾತನಾಡಿ, ಸಮುದಾಯಗಳ ಆಶೋತ್ತರಗಳು ಹೆಚ್ಚಿವೆ. ಎಸ್ಸಿ,ಎಸ್ಟಿ ರಿಸರ್ವೇಶನ್ ಹೆಚ್ಚಳ ಮಾಡಿದ್ದೇವೆ. ಅಸೆಂಬ್ಲಿಯಲ್ಲಿ ಕಾನೂನು ಮಾಡಿದ್ದೇವೆ. ಈಗ ಆ ಹೆಚ್ಚಳ ಅನುಷ್ಠಾನದಲ್ಲಿದೆ. 9 ಶೆಡ್ಯೂಲ್ ಗೆ ನಾವು ಕಳಿಸಿದ್ದೇವೆ ಎಂದರು.
    ST ಒಳಗೆ 101 ಕ್ಯಾಸ್ಟ್ ಗಳಿವೆ. ಟಚಬಲ್, ಅನ್ ಟಚ್ಚಬಲ್ ನಾವು ನೋಡಿದ್ದೇವೆ. ಇತ್ತೀಚೆಗೆ ಅನ್ ಟಚ್ಚಬಲ್ ಸೇರಿದ್ದಾರೆ. ಬಂಜಾರ,ಕೊರಮ, ಕೊರಚ ಟಚ್ಚಬಲ್ ಕಮ್ಯುನಿಟಿಯಾಗಿದೆ. ಇವರಿಗೆ ನಮ್ಮನ್ನ ತೆಗೆಯುತ್ತಾರೆಂಬ ಆತಂಕವಿತ್ತು. ಬೋವಿ, ಲಂಬಾಣಿ, ಕೊರಚ ಒರಿಜಿನಲ್ ಶೆಡ್ಯೂಲ್ ಕಾಸ್ಟ್ ಆಗಿತ್ತು. ಇದು ಮಹಾರಾಜರ ಕಾಲದಲ್ಲಿತ್ತು.


     ಸ್ವಾತಂತ್ರ್ಯ ಬಂದ ನಂತರ ಅವರು ಅಲ್ಲೇ ಇದ್ದಾರೆ. ಎಸ್ಸಿ ಪಟ್ಟಿಯಲ್ಲೇ
ಅವರಿದ್ದಾರೆ. ಕೇಂದ್ರಕ್ಕೆ ನಾವು ಅದನ್ನ ಶಿಫಾರಸು ಮಾಡಿದ್ದೇವೆ. ಒಳ ಮೀಸಲಾತಿಯಲ್ಲಿ ಭಿನ್ನಾಭಿಪ್ರಾಯಗಳು ಇದ್ದು, ಕ್ಯಾಬಿನೆಟ್ ಸಬ್ ಕಮಿಟಿ ಮಾಡಿದ್ದೆವು. ಎಸ್ಸಿಯಲ್ಲಿ ಈಗ ಎಲ್ಲರಿಗೆ ನ್ಯಾಯ ಸಿಗಬೇಕು. ನ್ಯಾಯ ಸಿಗಬೇಕಾದರೆ 3412೨ ಅನ್ವಯ ಆಗಬೇಕು ಎಂದರು. ನಾಲ್ಕು ಗುಂಪುಗಳಲ್ಲಿ ವರ್ಗೀಕರಣ ಮಾಡಲಾಗಿತ್ತು. ದಲಿತ ಎಡ, ದಲಿತ ಬಲ,  
ಟಚ್ಚಬಲ್, ಅದರ್ಸ್ ಇವೆ. ಎಡಕ್ಕೆ 6% ಮೀಸಲು, ಬಲಗೈಗೆ 5.5,
ಟಚ್ಚಬಲ್ ಗೆ 4.5, ಇತರರಿಗೆ ಶಿಫಾರಸ್ ಇತ್ತು. ಇದನ್ನ ನಮ್ಮ ಸಂಪುಟ
ಇದನ್ನ ಒಪ್ಪಿಕೊಂಡಿದೆ ಎಂದರು.