ಕುಂಟ ಕುರುಡನೆಂಬ - ಕೀರ್ತನೆ - ಶಿಶುನಾಳ ಶರೀಪರು

 ಸಾಹಿತ್ಯ:-ಸಂತ  ಶಿಶುನಾಳ ಶರೀಫ

ಸಂಗೀತ:-ಕೆ. ಯುವರಾಜ್

ಗಾಯನ:-ಕೆ. ಯುವರಾಜ್&ವೃಂದ



ಕುಂಟ ಕುರುಡರೆಂಟು ಮಂದಿ

ರಂಟಿ ಹೊಡಿಯಲು

ಸುಂಟರಗಾಳಿಗೆ ಸಿಗದೆ ಲೋಕದ 

ರಂಟಿ ಹೊಡಿಯಲು,ರಂಟಿ ಹೊಡಿಯಲು ll


ಸುಜ್ಞಾನವೆಂಬ ಕುಂಟಿಯ ಹೂಡಿ

ರಂಟಿ ಹೊಡಿಯಲು

ಪ್ರಜ್ಞಾನವೆಂಬ ಕೂರಿಗೆ ಹೂಡಿ

ಬೀಜ ಬಿತ್ತಲೂ ll


ಕರಿಯ ಬೀಜ ಬಿಳಿಯ ಬೀಜ

ಬೀಜ ಹಿಡಿಯಲು

ಅರಿಯದಾದ ಮಾತು ಇದರ

ಮರ್ಮ ತಿಳಿಯಲು ll


ಬಣ್ಣ ಕೆಂಪು ಹಸಿರು ಹಳದಿಯು

ವರ್ಣ ತಿಳಿಯಲು

ಧರಣಿಪತಿ ಶಿಶುನಾಳೇಶನ

ಮರ್ಮಾವರಿಯಲು ll